ಪೋಷಕರು ಮಕ್ಕಳಿಗಾಗಿ ಸಮಯವನ್ನು ಮೀಸಲಿರಿಸಿ..

Vijayanagara Vani
ಪೋಷಕರು ಮಕ್ಕಳಿಗಾಗಿ ಸಮಯವನ್ನು ಮೀಸಲಿರಿಸಿ..
ಚಿತ್ರದುರ್ಗಆಗಸ್ಟ್.21:
ಪೋಷಕರು ಮಕ್ಕಳಿಗಾಗಿ ಸಮಯವನ್ನು ಮೀಸಲಿರಿಸಿಬೇಕು. ಪ್ರೀತಿಯಿಂದ ಅವರೊಡನೆ ವ್ಯವಹರಿಸುವ ಮೂಲಕ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಶ್ರಮಿಸಬೇಕು ಎಂದು ಜಿಲ್ಲಾ ಮಹಿಳಾ ಸಬಲೀಕರಣ ಘಟಕದ ಡಿ.ಗೀತಾ ಹೇಳಿದರು.
ಬುಧವಾರ ಭೀಮಸಮಯದ್ರ ಗ್ರಾಮದ ಹಾಲಮ್ಮ ಮಲ್ಲಿಕಾರ್ಜುನಪ್ಪ ಸಮುದಾಯ ಭವನದಲ್ಲಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಭರಮಸಾಗರ ಶಿಶು ಅಭಿವೃದ್ಧಿ ಯೋಜನೆ ಮತ್ತು ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ, ಮಿಷನ್ ಶಕ್ತಿ ಯೋಜನೆಯ 100 ದಿನಗಳ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹದಿಹರೆಯದ ಮಕ್ಕಳ ಭಾವನಾತ್ಮಕ ಮನಸ್ಥಿತಿ ಸೂಕ್ಷö್ಮವಾಗಿರುತ್ತದೆ. ಅವರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು. ಕುಟುಂಬದಲ್ಲಿನ ವಿಘಟನೆ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ. ಮಕ್ಕಳ ಕಡೆ ಗಮನಹರಿಸದಿದ್ದರೆ ಅವರು ದುಶ್ಚಟಗಳ ದಾಸರಾಗಬಹುದು. ಪ್ರೀತಿ ಪ್ರೇಮ ಎಂಬ ಮೋಹಕ್ಕೆ ಒಳಗಾಗಬಹುದು. ಇದರಿಂದ ವಯಸ್ಕರಾಗುವ ಮುನ್ನವೇ ಬಾಲ್ಯ ವಿವಾಹ ಹಾಗೂ ಬಾಲ ತಾಯಂದಿರಾಗುವ ಪರಿಸ್ಥಿತಿಗೆ ಎದುರಾಗುತ್ತದೆ. ಪೋಷಕರ ಮೇಲೆ ಮಕ್ಕಳಿಗೆ ನಂಬಿಕೆ ಇಲ್ಲದೇ ಹೋದರೆ ಅಥವಾ ಭಯದ ಮನೋಭವ ಇದ್ದರೆ ತಮ್ಮ ಮೇಲಿ ಆಗುತ್ತಿರುವ ದೌರ್ಜನ್ಯಗಳನ್ನು ಸಹ ಹೇಳಿಕೊಳ್ಳದೇ ಹೋಗಬಹುದು. ಆದ್ದರಿಂದ ಪೋಷಕು ಹೆಚ್ಚು ಜಬ್ದಾರಿಯಿಂದ ವರ್ತಿಸಬೇಕು ಎಂದು ಡಿ.ಗೀತಾ ಹೇಳಿದರು.
ಇದೇ ವೇಳೆ ಬಾಲ್ಯವಿವಾಹ, ಬಾಲತಾಯಂದಿರು ಹಾಗೂ ಮಕ್ಕಳ ಮೇಲಿನ ದೌರ್ಜನ ಪ್ರಕರಣಗಳು ಕಂಡುಬ0ದರೆ ಮಕ್ಕಳ ಸಹಾಯವಾಣಿ ಸಂಖ್ಯೆ 1098 ಕರೆ ಮಾಡಿ ತಿಳಿಸಬೇಕು. ಮಹಿಳೆಯರ ಮತ್ತು ಮಕ್ಕಳ ಮಾರಾಟ ನಿಷೇಧ ಕಾಯ್ದೆ ಬಗ್ಗೆ ಮಾಹಿತಿ ನೀಡಿದರು ಹಾಗೂ ಹೆಣ್ಣು ಮಕ್ಕಳ ಭ್ರೂಣ ಹತ್ಯೆಯನ್ನು ತಡೆಯುವ ನಿಟ್ಟಿನಲ್ಲಿ ಎಲ್ಲರೂ ಸಹ ಕೈಜೋಡಿಸಬೇಕು. ಮಹಿಳೆಯರ ಮೇಲಿನ ದೌರ್ಜನ ತಡೆಯಲು ಸಹಾಯವಾಣಿ ಸಂಖ್ಯೆ 181 ಈ ನಂಬರಿಗೆ ಕರೆ ಮಾಡಬಹುದು. ಹೀಗೆ ಕರೆ ಮಾಡಿದವರು ಹೆಸರು ಗೌಪ್ಯವಾಗಿ ಇರಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ವಲಯ ಮೇಲ್ವಿಚಾರಕಿ ರಂಜಿನಿ ಸಂಪತ್, ಒಕ್ಕೂಟದ ಅಧ್ಯಕ್ಷೆ ಉಷಾ, ಮಿಷನ್ ಶಕ್ತಿ ಸಂಯೋಜಕ ವಿನಯ್ ಹಾಗೂ ಸಂಘದ ಪದಾಧಿಕಾರಿಗಳು ಹಾಜರಿದ್ದರು.
WhatsApp Group Join Now
Telegram Group Join Now
Share This Article
error: Content is protected !!