*ಡೀಸೆಲ್ ಮತ್ತು ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ”ಕರವೇ” ಪ್ರವೀಣ್ ಶೆಟ್ಟಿ ಬಣ ಪ್ರತಿಭಟನೆ  ಜಿಲ್ಲಾ ಘಟಕ*

Vijayanagara Vani
*ಡೀಸೆಲ್ ಮತ್ತು ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ”ಕರವೇ” ಪ್ರವೀಣ್ ಶೆಟ್ಟಿ ಬಣ ಪ್ರತಿಭಟನೆ  ಜಿಲ್ಲಾ ಘಟಕ*
ವಿಜಯನಗರ(ಹೊಸಪೇಟೆ):ಜೂ.20.ಕರ್ನಾಟಕ ರಕ್ಷಣಾ ವೇದಿಕೆಯ ಹೆಮ್ಮೆಯ ರಾಜ್ಯದ್ಯಕ್ಷರಾದ ಶ್ರೀ ಪ್ರವೀಣ ಕುಮಾರ ಶೆಟ್ಟಿ ಅವರ ಆದೇಶ ಹಾಗೂ ವಿಜಯನಗರ  ಜಿಲ್ಲಾಧ್ಯಕ್ಷರಾದ ಶ್ರೀ ಷಣ್ಮುಖ ರವರ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಡೀಸೆಲ್ ಮತ್ತು ಪೆಟ್ರೋಲ್ ಬೆಲೆ ಏರಿಕೆ ಮಾಡಿರುವುದನ್ನು  ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆಯನ್ನು ಇಂದು ಹಮ್ಮಿಕೊಳ್ಳಲಾಗಿತ್ತು ನಮ್ಮ ವಿಜಯನಗರ ಜಿಲ್ಲೆ ಯಲ್ಲಿ ಇರುವ ಎಲ್ಲ ತಾಲೂಕ ಅಧ್ಯಕ್ಷರು ಹೋಬಳಿ ಘಟಕ ಅಧ್ಯಕ್ಷರು ಪ್ರತಿಯೊಬ್ಬರು ಭಾಗವಹಿಸಿ  
ಈ ಪ್ರತಿಭಟನೆಯನ್ನು ಹಮ್ಮಿಕೊಂಡು ರಾಜ್ಯ ಸರ್ಕಾರದ‌ ವಿರುದ್ಧ ಘೋಷಣೆ ಕೂಗಿ ಸರ್ಕಾರವು ಬೆಲೆ ಏರಿಕೆ ಮಾಡಿರುವುದರಿಂದ ಬಡವರು ದಿನ ನಿತ್ಯ ಬಳಕೆ ವಸ್ತುಗಳು ಹಾಗೂ ದವಸ ದಾನ್ಯಗಳು ಬೆಲೆ ಏರಿಕೆ ಯಾಗುತ್ತವೆ ಹಾಗೂ ಆಟೋಡ್ರೈವರ್,ಹಾಗೂ ಕಾರ್ ಗಳ ಮಾಲಿಕರಿಗೆ ಹಾಗೂ ಬಡವರಿಗೆ ಹಾಗೂ ದೀನ ದಲಿತರಿಗೆ  ಜೀವನ ನಡೆಸುವುದು ಕಷ್ಟ ಕರವಾಗಿದೆ,
ಸರ್ಕಾರ 5 ಗ್ಯಾರಂಟಿ ಗಳನ್ನು ಜಾರಿ ಮಾಡಿ ಅಧಿಕಾರ ಕ್ಕೆ ಬಂದಿದೆ ಈಗ ಮುಂಬಾಗಿಲಿನಿಂದ ಕೊಟ್ಟು ಹಿಂಬಾಗಿಲಿನಿಂದ ತೆಗೆದುಕೊಳ್ಳುವ ಕೆಲಸ ಮಾಡುತ್ತದೆ  ಸರ್ಕಾರ ತಕ್ಷಣ ಬೆಲೆ ಏರಿಕೆ ಮಾಡಿರುದನ್ನು  ಹಿಂಬಡೆಯಬೇಕು ಒಂದು ವೇಳೆ ಹಿಂಬಡೆಯದಿದ್ದರೆ ನಮ್ಮ ಪ್ರವೀಣ ಕುಮಾರ್ ಶೆಟ್ಟಿ ಬಣ ರಾಜ್ಯದಾದ್ಯಂತ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳ ಮುಖಾಂತರ ಕಛೇರಿಯವರೆಗೆ ರಾಜ್ಯ ಸರ್ಕಾರಕ್ಕೆ ಮನವಿ ಕೊಡುವುದರ ಜೊತೆಗೆ ಎಚ್ಚರಿಕೆಯನ್ನು ನೀಡಲಾಯಿತು.
  ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರು ಷಣ್ಮುಖ.ಪಿ.ಜಿಲ್ಲಾ ಉಪಾಧ್ಯಕ್ಷರಾದ ತಿಪ್ಪಣ್ಣ,ಜಯಶೀಲ ಶೆಟ್ಟಿ,ಹೆಚ್ ಪಂಪಾಪತಿ ತಾಲೂಕು ಯುವ ಘಟಕ ಅಧ್ಯಕ್ಷರು,, , ರಾಘವೇಂದ್ರ ತಾಲೂಕು ಉಪಾಧ್ಯಕ್ಷರು,  
ಪ್ರಶಾಂತ, ರಾಘವೇಂದ್ರ ಹೆಗಡೆ ತುಕರಾಮ್,ಸ್ವಾಮಿ,ರಾಮಪ್ಪ,
ಭೀಮಪ್ಪ ಗುರು ಕರವೇ ಎಲ್ಲಾ ಸದಸ್ಯರು ಭಾಗವಹಿಸಿದ್ದರು.
WhatsApp Group Join Now
Telegram Group Join Now
Share This Article
error: Content is protected !!