ಶಿವಮೊಗ್ಗ : ಆಗಸ್ಟ್ 26, ಅಭ್ಯರ್ಥಿಗಳು ಉತ್ತಮ ಪ್ರಯತ್ನಗಳನ್ನು ಪ್ರದರ್ಶಿಸುವ ಮೂಲಕ ಭಾರತೀಯ ಸೇನೆಗೆ ನೇಮಕಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆರವರು ಪ್ರೇರೇಪಿಸಿದರು

Vijayanagara Vani
ಶಿವಮೊಗ್ಗ : ಆಗಸ್ಟ್ 26, ಅಭ್ಯರ್ಥಿಗಳು ಉತ್ತಮ ಪ್ರಯತ್ನಗಳನ್ನು ಪ್ರದರ್ಶಿಸುವ ಮೂಲಕ ಭಾರತೀಯ ಸೇನೆಗೆ ನೇಮಕಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆರವರು ಪ್ರೇರೇಪಿಸಿದರು

ಆಗಸ್ಟ್ 24 ರಂದು ಶಿವಮೊಗ್ಗ ನಗರದಲ್ಲಿ 2024ನೇ ಸಾಲಿನ ಅಗ್ನಿಪಥ್ ಯೋಜನೆಯಡಿ ನಡೆಯುತ್ತಿರುವ ಅಗ್ನಿವೀರ್ ಸೇನಾ ನೇಮಕಾತಿ ರ‍್ಯಾಲಿಗೆ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ನೇಮಕಾತಿ ರ‍್ಯಾಲಿಯ ಪ್ರಕ್ರಿಯೆಯನ್ನು ಉದ್ಘಾಟಿಸಿ ಮಾತನಾಡಿದರು.

ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವೈದ್ಯಕೀಯ ಪರೀಕ್ಷಾ ವಿಧಿವಿಧಾನಗಳನ್ನು ವೀಕ್ಷಿಸಿ, ಶಿವಮೊಗ್ಗ ಜಿಲ್ಲಾಡಳಿತದಿಂದ ಅವಶ್ಯಕ ವೈದ್ಯಕೀಯ ನೆರವುಗಳ ಕುರಿತು ಚರ್ಚಿಸಿದರು ಹಾಗೂ ಅಗ್ನಿವೀರ್ ಸೇನಾ ನೇಮಕಾತಿ  ರ‍್ಯಾಲಿ ಯು ಸುಗಮವಾಗಿ ನಡೆಯಲು ಶಿವಮೊಗ್ಗ ಜಿಲ್ಲಾಡಳಿತದಿಂದ ಎಲ್ಲಾ ರೀತಿಯ ಬೆಂಬಲ ಇರುತ್ತದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.

ಕರ್ನಲ್ ಕಶ್ಯಪ್ ಕೃಷ್ಣನ್, ಸೇನಾ ನೇಮಕಾತಿ ನಿರ್ದೇಶಕರು, ಮಂಗಳೂರು ಇವರು ಸೇನಾ ನೇಮಕಾತಿ ಸಂಬ0ಧಿತ ಪ್ರತಿ ವ್ಯವಸ್ಥೆಗಳನ್ನು ವಿವರಿಸಿದರು ಹಾಗೂ ಬೆಂಗಳೂರು ಸೇನಾ ನೇಮಕಾತಿ ವಲಯದ ಸೇನಾಧಿಕಾರಿಗಳಾದ ಬ್ರಿಗೇಡಿಯರ್ ಎಸ್.ಕೆ. ಸಿಂಗ್ ರವರೊಂದಿಗೆ ಸಂವಾದ ನಡೆಸಿದರು.

WhatsApp Group Join Now
Telegram Group Join Now
Share This Article
error: Content is protected !!