ಜಿಲ್ಲೆಯಲ್ಲಿರುವ ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು ಮಾಹಿತಿ

Vijayanagara Vani
ಜಿಲ್ಲೆಯಲ್ಲಿರುವ ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು ಮಾಹಿತಿ

ರಾಯಚೂರು,ಜೂ.05 2024-25 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರಾಯಚೂರು ಜಿಲ್ಲೆಯ 37 ರೈತ ಸಂಪರ್ಕ ಕೇಂದ್ರಗಳಲ್ಲಿ (4 ಹೆಚ್ಚುವರಿ ಬೀಜ ಮಾರಾಟ ಕೇಂದ್ರಗಳು ಸೇರಿ) ತೊಗರಿ-2799.20ಕ್ವಿಂ, ಸಜ್ಜೆ- 72.63ಕ್ವಿಂ ಭತ್ತ-768ಕ್ವಿಂ, ಹೆಸರು-28.45ಕ್ವಿಂ, ಮೆಕ್ಕೆಜೋಳ-17.60ಕ್ವಿಂ ಹಾಗೂ ಸೂರ್ಯಕಾಂತಿ-43.60ಕ್ವಿAಟಾಲ ಸೇರಿ ಒಟ್ಟು:3729.48 ಕ್ವಿಂಟಾಲ್‌ಗಳಷ್ಟು ಬಿತ್ತನೆ ಬೀಜಗಳನ್ನು ಈಗಾಗಲೆ ದಾಸ್ತಾನು ಮಾಡಲಾಗಿರುತ್ತದೆ. ಮುಂದುವರೆದು ಇಂದಿನವರೆಗೆ ಜಿಲ್ಲೆಯಲ್ಲಿ ಮೇಲಿನ ಎಲ್ಲಾ ಬಿತ್ತನೆ ಬೀಜಗಳು ಸೇರಿ ಒಟ್ಟು 1933.66 ಕ್ವಿಂಟಾಲ್ ನÀಷ್ಟು ವಿತರಣೆಯಾಗಿರುತ್ತದೆ ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
ರಾಯಚೂರು ತಾಲೂಕಿನಲ್ಲಿ ತೊಗರಿ – 153.40ಕ್ವಿಂ, ಭತ್ತ-208ಕ್ವಿಂ ಹಾಗೂ ಹೆಸರು-1.45 ಕ್ವಿಂಟಾಲ ಸೇರಿ ಒಟ್ಟು 363.75 ಕ್ವಿಂಟಾಲ್‌ಗಳಷ್ಟು ಬಿತ್ತನೆ ಬೀಜಗಳನ್ನು ಈಗಾಗಲೆ ದಾಸ್ತಾನು ಮಾಡಲಾಗಿರುತ್ತದೆ. ಭತ್ತ, ತೊಗರಿ ಮತ್ತು ಹೆಸರು ಸೇರಿ 136ಕ್ವಿಂ ನಷ್ಟು ವಿತರಣೆಯಾಗಿರುತ್ತದೆ. ಮಾನವಿ ತಾಲೂಕಿನಲ್ಲಿ ತೊಗರಿ – 68.80ಕ್ವಿಂ, ಭತ್ತ-85ಕ್ವಿಂ ಹಾಗೂ ಹೆಸರು-1.80ಕ್ವಿಂಟಾಲ ಸೇರಿ ಒಟ್ಟು 155.60 ಕ್ವಿಂಟಾಲ್‌ಗಳಷ್ಟು ಬಿತ್ತನೆ ಬೀಜಗಳನ್ನು ಈಗಾಗಲೆ ದಾಸ್ತಾನು ಮಾಡಲಾಗಿರುತ್ತದೆ. ಭತ್ತ, ತೊಗರಿ ಮತ್ತು ಹೆಸರು ಸೇರಿ 80.85 ಕ್ವಿಂ ನಷ್ಟು ವಿತರಣೆಯಾಗಿರುತ್ತದೆ.
ದೇವದುರ್ಗ ತಾಲೂಕಿನಲ್ಲಿ ತೊಗರಿ – 65ಕ್ವಿಂ, ಭತ್ತ-258.80ಕ್ವಿಂ ಹಾಗೂ ಹೆಸರು-7.20 ಕ್ವಿಂಟಾಲ ಸೇರಿ ಒಟ್ಟು 331ಕ್ವಿಂಟಾಲ್‌ಗಳಷ್ಟು ಬಿತ್ತನೆ ಬೀಜಗಳನ್ನು ಈಗಾಗಲೆ ದಾಸ್ತಾನು ಮಾಡಲಾಗಿರುತ್ತದೆ. ಭತ್ತ, ತೊಗರಿ ಮತ್ತು ಹೆಸರು ಸೇರಿ 173.55 ಕ್ವಿಂ ನಷ್ಟು ವಿತರಣೆಯಾಗಿರುತ್ತದೆ. ಸಿರವಾರ ತಾಲೂಕಿನಲ್ಲಿ ತೊಗರಿ–445.60ಕ್ವಿಂ, ಭತ್ತ-80 ಕ್ವಿಂ, ಸಜ್ಜೆ-1.80 ಕ್ವಿಂ, ಸೂರ್ಯಕಾಂತಿ – 3.30ಕ್ವಿಂ ಹಾಗೂ ಹೆಸರು-3ಕ್ವಿಂಟಾಲ ಸೇರಿ ಒಟ್ಟು 535.95 ಕ್ವಿಂಟಾಲ್‌ಗಳಷ್ಟು ಬಿತ್ತನೆ ಬೀಜಗಳನ್ನು ಈಗಾಗಲೆ ದಾಸ್ತಾನು ಮಾಡಲಾಗಿರುತ್ತದೆ. ಭತ್ತ, ತೊಗರಿ ಮತ್ತು ಹೆಸರು ಸೇರಿ 276.20 ಕ್ವಿಂ ನಷ್ಟು ವಿತರಣೆಯಾಗಿರುತ್ತದೆ.
ಲಿಂಗಸುಗೂರು ತಾಲೂಕಿನಲ್ಲಿ ತೊಗರಿ–749ಕ್ವಿಂ, ಸಜ್ಜೆ–10.74ಕ್ವಿಂ, ಸೂರ್ಯಕಾಂತಿ-4.20ಕ್ವಿA ಹಾಗೂ ಹೆಸರು -3.00 ಕ್ವಿಂಟಾಲ ಸೇರಿ ಒಟ್ಟು 766.94 ಕ್ವಿಂಟಾಲ್‌ಗಳಷ್ಟು ಬಿತ್ತನೆ ಬೀಜಗಳನ್ನು ಈಗಾಗಲೆ ದಾಸ್ತಾನು ಮಾಡಲಾಗಿರುತ್ತದೆ. ತೊಗರಿ, ಸಜ್ಜೆ ಮತ್ತು ಸೂರ್ಯಕಾಂತಿ ಸೇರಿ 548.69 ಕ್ವಿಂ ನಷ್ಟು ವಿತರಣೆಯಾಗಿರುತ್ತದೆ.
ಮಸ್ಕಿ ತಾಲೂಕಿನಲ್ಲಿ ತೊಗರಿ–856ಕ್ವಿಂ, ಭತ್ತ-85ಕ್ವಿಂ, ಸಜ್ಜೆ–28.95ಕ್ವಿಂ, ಸೂರ್ಯಕಾಂತಿ-15ಕ್ವಿA, ಮೆಕ್ಕೆಜೋಳ-4.00ಕ್ವಿಂ ಹಾಗೂ ಹೆಸರು-3.60ಕ್ವಿಂಟಾಲ ಸೇರಿ ಒಟ್ಟು 992.55 ಕ್ವಿಂಟಾಲ್‌ಗಳಷ್ಟು ಬಿತ್ತನೆ ಬೀಜಗಳನ್ನು ಈಗಾಗಲೆ ದಾಸ್ತಾನು ಮಾಡಲಾಗಿರುತ್ತದೆ. ತೊಗರಿ, ಸಜ್ಜೆ ಮತ್ತು ಸೂರ್ಯಕಾಂತಿ ಸೇರಿ 500.83 ಕ್ವಿಂ ನಷ್ಟು ವಿತರಣೆಯಾಗಿರುತ್ತದೆ.
ಸಿಂಧನೂರು ತಾಲೂಕಿನಲ್ಲಿ ತೊಗರಿ–267.60ಕ್ವಿಂ, ಭತ್ತ-245ಕ್ವಿಂ, ಸಜ್ಜೆ–27.99ಕ್ವಿಂ, ಸೂರ್ಯಕಾಂತಿ-21.10ಕ್ವಿA, ಮೆಕ್ಕೆಜೋಳ-13.60ಕ್ವಿಂ ಹಾಗೂ ಹೆಸರು-8.40ಕ್ವಿಂ ಕ್ವಿಂಟಾಲ ಸೇರಿ ಒಟ್ಟು 583.69 ಕ್ವಿಂಟಾಲ್‌ಗಳಷ್ಟು ಬಿತ್ತನೆ ಬೀಜಗಳನ್ನು ಈಗಾಗಲೆ ದಾಸ್ತಾನು ಮಾಡಲಾಗಿರುತ್ತದೆ. ಭತ್ತ, ತೊಗರಿ, ಸಜ್ಜೆ, ಸೂರ್ಯಕಾಂತಿ, ಮೆಕ್ಕೆಜೋಳ ಮತ್ತು ಹೆಸರು ಸೇರಿ 217.54ಕ್ವಿಂ ನಷ್ಟು ವಿತರಣೆಯಾಗಿರುತ್ತದೆ.
2024-25ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ, ರಾಯಚೂರು ಹಾಗೂ ಸಹಕಾರಿ ಸಂಘಗಳಲ್ಲಿ 10673 ಮೆಟ್ರಿಕ್ ಟನ್ ಹಾಗೂ ಖಾಸಗಿ ಮಾರಾಟಗಾರರಲ್ಲಿ 99018.29 ಮೆಟ್ರಿಕ್ ಟನ್ ಸೇರಿದಂತೆ ಒಟ್ಟು 109691.72 ಮೆಟ್ರಿಕ್ ಟನ್‌ನಷ್ಟು ಇಲ್ಲಿಯವರೆಗೆ ರಸಗೊಬ್ಬರ ದಾಸ್ತಾನು ಲಭ್ಯವಿದೆ.

WhatsApp Group Join Now
Telegram Group Join Now
Share This Article
error: Content is protected !!