Ad image

ಸಿರುಗುಪ್ಪ ತಾಲ್ಲೂಕಿನ ಕೆಂಚನಗುಡ್ಡ ಗ್ರಾಮ ಪಂಚಾಯತಿಯಲ್ಲಿ ಅರ್ಥಪೂರ್ಣ ಮಕ್ಕಳ ಹಕ್ಕುಗಳ ವಿಶೇಷ ಗ್ರಾಮ ಸಭೆ.

Vijayanagara Vani
ಸಿರುಗುಪ್ಪ ತಾಲ್ಲೂಕಿನ ಕೆಂಚನಗುಡ್ಡ ಗ್ರಾಮ ಪಂಚಾಯತಿಯಲ್ಲಿ ಅರ್ಥಪೂರ್ಣ ಮಕ್ಕಳ ಹಕ್ಕುಗಳ ವಿಶೇಷ ಗ್ರಾಮ ಸಭೆ.

ಮಕ್ಕಳಿಗೆ ಸಂಬಂಧಪಟ್ಟ ಮಾಹಿತಿ ಸಮಸ್ಯೆಗಳನ್ನು ಮಕ್ಕಳಿಂದಲೇ ತಿಳಿದುಕೊಳ್ಳುವುದು, ಸಕಾಲದಲ್ಲಿ ಮಕ್ಕಳ ಸಮಸ್ಯೆಗಳಿಗೆ ಪರಿಹಾರ ನೀಡಿ ಮಕ್ಕಳ ಹಕ್ಕುಗಳ ರಕ್ಷಣೆ ಮಾಡುವುದು ಮಕ್ಕಳ ವಿಶೇಷ ಗ್ರಾಮ ಸಭೆಯ ಸದುದ್ದೇಶವಾಗಿದೆ ಎಂದು ಗ್ರಾಮಾಭಿವೃದ್ಧಿ ಅಧಿಕಾರಿಗಳಾದ ಬಸವನಗೌಡ ಇವರು ತಾಲೂಕಿನ

ಸ. ಹಿ ಪ್ರಾ ಶಾಲೆ ಕೆಂಚನಗುಡ್ಡದಲ್ಲಿ ಕೆಂಚನಗುಡ್ಡ ಗ್ರಾಮ ಪಂಚಾಯಿತಿ ಯಿಂದ ದಿನಾಂಕ 22.01.2025 ರ ಬುಧವಾರದಂದು ಹಮ್ಮಿಕೊಂಡಿದ್ದ ಮಕ್ಕಳ ಹಕ್ಕುಗಳ ವಿಶೇಷ ಗ್ರಾಮ ಸಭೆಯಲ್ಲಿ ಮಾತನಾಡಿದರು .

ಎಂ ಟಿ ಶಾಂತ ಸಮೂಹ ಸಂಪನ್ಮೂಲ ವ್ಯಕ್ತಿಗಳು ಕೆಂಚನಗುಡ್ಡ
ಇವರು ಮಾತನಾಡುತ್ತಾ ಮಕ್ಕಳ ಹಕ್ಕುಗಳ ವಿಶೇಷ ಗ್ರಾಮ ಸಭೆಯ ಆಯೋಜನೆಯ ಉದ್ದೇಶ,
ಮಕ್ಕಳ ಹಕ್ಕುಗಳ ರಕ್ಷಣೆಗೆ ಸಂಬಂಧಿಸಿದ ಭಾಗಿದಾರರ ಬಗ್ಗೆ, ಶಾಲೆಗಳಿಂದ ಹೊರಗೆ ಉಳಿದ ಮಕ್ಕಳನ್ನು ಮರಳಿ ಶಾಲೆಗೆ ಕರೆ ತರುವಲ್ಲಿ ಗ್ರಾಮ ಪಂಚಾಯತಿ ಶಿಕ್ಷಣ ಕಾರ್ಯ ಪಡೆಯ ಜವಾಬ್ದಾರಿ ಬಗ್ಗೆ, ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯ್ದೆ 2009 ರ ಗುರಿಗಳು ಹಾಗೂ ಅನುಷ್ಠಾನದ ಕುರಿತು, ಮಕ್ಕಳ ರಕ್ಷಣಾ ಸಮಿತಿ, ಮಕ್ಕಳ ಸಹಾಯವಾಣಿಗಳಾದ 1098, 112 ರ ಬಗ್ಗೆ, ವಿಶೇಷ ಚೇತನ ಮಕ್ಕಳ ಕಾಳಜಿ ಬಗ್ಗೆ , ಸರ್ಕಾರಿ ಸೌಲಭ್ಯಗಳ ಬಗ್ಗೆ , ಮಕ್ಕಳ ಕಲಿಕೆಯ ಕುರಿತು ವಲಯದ ಪ್ರಗತಿಯ ಬಗ್ಗೆ ಮಾತನಾಡುತ್ತಾ
ಪೋಷಕರು ಮಕ್ಕಳ ಜೈವಿಕ ಪೋಷಕರಾದರೆ- ಸರ್ಕಾರ ಮಕ್ಕಳ ಕಾನೂನಾತ್ಮಕ ಪೋಷಕ ಆಗಿರುತ್ತದೆ ಕಾರಣ ಪೋಷಕರು ಮಕ್ಕಳ ಸರ್ವಾಂಗೀಣ ವಿಕಾಸಕ್ಕಾಗಿ ಸರ್ಕಾರದ ಜೊತೆ ಕೈಜೋಡಿಸಬೇಕಾಗಿದೆ ಎಂದು ಹೆಳಿದರು

ನಂತರದಲ್ಲಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸರ್ಕಾರಿ ಶಾಲೆಗಳಾದ ಸ ಹಿ ಪ್ರಾ ಶಾಲೆ ಕೆಂಚನಗುಡ್ಡ,ಹೆರಕಲ್, ಕೆಂಚನಗುಡ್ಡ ತಾಂಡ ,ಮಲ್ಲೇಶ್ವರ ನಗರ, ವಸುಧೇಂದ್ರ ಮಠ ಮಕ್ಕಳಿಂದ ಸಮಸ್ಯೆಗಳ ಅಹವಾಲುಗಳನ್ನು ಸ್ವೀಕರಿಸಿದ ಗ್ರಾಮಾಭಿವೃದ್ಧಿ ಅಧಿಕಾರಿಗಳು ಮುಂದಿನ ಒಂದು ವರ್ಷದ ಕ್ರಿಯಾ ಯೋಜನೆಯನ್ನು ತಯಾರಿಸಿ ತುರ್ತು ಆದ್ಯತೆ ಮೇರೆಗೆ ಶಾಲೆಗಳ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕೆಂಚನಗುಡ್ಡ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಹನುಮಂತಮ್ಮ, ಗ್ರಂಥ ಪಾಲಕರಾದ ಅಡಿವೆಪ್ಪ, ಮುಖ್ಯಗುರುಗಳಾದ ಮಹಾದೇವಪ್ಪ ,ರವಿಕುಮಾರ ನಾಗರತ್ನಮ್ಮ, ವಿಜಯ ನಿರ್ಮಲ, ಲೊಕೇಶ, ಶಿವಾಜಿ ನಾಯ್ಕ ಉಳಿದಂತೆ ಶಾಲಾ ಸಿಬ್ಬಂದಿ – ಮಕ್ಕಳು ಹಾಗೂ ಆರು ಶಾಲೆಗಳಿಂದ ಬಂದಿದ್ದ ಮಕ್ಕಳು ಹಾಜರಿದ್ದರು.

Share This Article
error: Content is protected !!
";