Ad image

ಲೋಕಾಯುಕ್ತರ ಬಲೆಗೆ ಬಿದ್ದ ತಹಸೀಲ್ದಾರ್

Vijayanagara Vani
ಲೋಕಾಯುಕ್ತರ ಬಲೆಗೆ ಬಿದ್ದ ತಹಸೀಲ್ದಾರ್

ಸಿರುಗುಪ್ಪ‌.ಏ-22: ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಭೂ ಒಡೆತನದ ಸ್ಥಳ ಪರಿಶೀಲನೆ ವರದಿ ನೀಡಲು, 3.5 ಲಕ್ಷ ಬೇಡಿಕೆ ಇಟ್ಟಿದ್ದ ಸಿರುಗುಪ್ಪ ತಹಸೀಲ್ದಾರ್ ಎಚ್ ವಿಶ್ವನಾಥ 1.75 ಲಕ್ಷ ರೂ ಲಂಚದ ಹಣ ಸ್ವೀಕರಿಸುವಾಗ ಇಂದು ಸಂಜೆ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.
ಜಿಲ್ಲಾಸಮಾಜ‌ಕಲ್ಯಾಣ ಇಲಾಖೆ ವತಿಯಿಂದ ಅಲೆಮಾರಿಗಳಿಗೆ ಜಮೀನು ಮಾರಾಟ ಮಾಡಲು ಮುಂದಾಗಿದ್ದ ಜಮೀನಿನ ಪರಿಶೀಲನೆ ನೀಡಲು 3.5 ಲಕ್ಷ ರೂ ಲಂಚ ಕೇಳಿದ್ದರಂತೆ. ರಾಯಚೂರಿನ ಸಾಮಾಜಿಕ ಕಾರ್ಯಕರ್ತ ಮಹಾಂತೇಶ್ ಎನ್ನುವ ವ್ಯಕ್ತಿಯು
ಈ ಮೊದಲು ಒಂದು ವರೆ ಲಕ್ಷ ರೂ ಮುಂಗಡ ನೀಡಿದ್ದರು. ಉಳಿದ 1.75 ಲಕ್ಷ ರೂಗಳನ್ನು ಮಂಗಳವಾರ ವಿಶ್ವನಾಥ ತಮ್ಮ ಸಿರುಗುಪ್ಪ ನಿವಾಸದಲ್ಲಿ ಪಡೆಯುವಾಗ ಲೋಕಾಯುಕ್ತ ಎಸ್ಪಿ ಸಿದ್ದರಾಜು ಮತ್ತವರ ತಂಡ ಲಂಚದ ಹಣದೊಂದಿಗೆ ತಹಸೀಲ್ದಾರ್ ವಿಶ್ವನಾಥರನ್ನು ಬಂಧಿಸಿದ್ದಾರೆ.

Share This Article
error: Content is protected !!
";