Ad image

ಅಮವಾಸ್ಯೆ ಪೂಜೆಗೆಂದು ತೆರಳಿದ್ದ ವ್ಯಕ್ತಿ ಸಿಡಿಲಿಗೆ ಬಲಿ

Vijayanagara Vani
ಅಮವಾಸ್ಯೆ ಪೂಜೆಗೆಂದು ತೆರಳಿದ್ದ ವ್ಯಕ್ತಿ ಸಿಡಿಲಿಗೆ ಬಲಿ
ಮಾನ್ವಿ: ಅಮವಾಸ್ಯ ಎಂದು ಗ್ರಾಮದಲ್ಲಿನ ಜಮೀನಿನಲ್ಲಿರುವ ತಾಯಮ್ಮ ದೇವಸ್ಥಾನಕ್ಕೆ ಪೂಜೆ ಸಲ್ಲಿಸುವುದಕ್ಕೆ ತೆರಳಿದ ಕುಟುಂಬದ ಸದಸ್ಯನೊಬ್ಬ ಸಿಡಿಲಿಗೆ ಬಲಿಯಾಗಿದ್ದು ಮಹಿಳೆ ತೀವ್ರಗಾಯಗೊಂಡಿರುವ ಘಟನೆ ತಾಲೂಕಿನ ಕೆ.ಗುಡದಿನ್ನಿ ಗ್ರಾಮದ ಹೋರವಲಯದಲ್ಲಿನ ತಾಯಮ್ಮ ದೇವಸ್ಥಾನದ ಹತ್ತಿರದ ಜಮೀನಿನಲ್ಲಿ ನಡೆದಿದ್ದು ಸಿರವಾರ ತಹಸೀಲ್ದಾರ್ ರವಿ ಅಂಗಡಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ತಾಲೂಕಿನ ಕೆ.ಗುಡದಿನ್ನಿ ಗ್ರಾಮದಲ್ಲಿ ಭಾನುವಾರ ಮಧ್ಯಾಹ್ನ ಅಮವಾಸ್ಯ ನಿಮಿತ್ಯವಾಗಿ ಪೂಜೆ ಸಲ್ಲಿಸುವುದಕ್ಕೆಂದು ತೆರಳಿದ್ದ  ಸಾಯಣ್ಣ ವ.೫೫  ಗುಡಿಯಲ್ಲಿ ಪೂಜೆ ಸಲ್ಲಿಸುತ್ತಿರುವಾಗಲೆ ಸಿಡಿಲು ಹೊಡೆದುಸ್ಥಳದಲ್ಲಿ ಮೃತಪಟ್ಟಿದ್ದು. ಸಾಯಣ್ಣ ರವರ ತಾಯಿ ಲಕ್ಷö್ಮಮ್ಮ ಹಾಗೂ ನರಸಮ್ಮ  ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಚಿಕಿತ್ಸೆಗಾಗಿ ಮಾನ್ವಿಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. 
ಗ್ರಾಮಲೇಕಾಧಿಕಾರಿ ಹುಸೇನಸಾಬ್ ಗ್ರಾಮದ ಹಿರಿಯ ಮುಖಂಡರಾದ ಶರಣಯ್ಯಗುಡದಿನ್ನಿ, ನಾಗಪ್ಪ ಯಾದವ್, ಬಸವರಾಜ ನಾಯಕ,  ತಾಯಣ್ಣ ಯಾದವ್ , ಫಕೀರಪ್ಪಸೇರಿದಂತೆ ಇನ್ನಿತರರು ಇದ್ದರು.

Share This Article
error: Content is protected !!
";