ಗಂಗಾಧರ ಸ್ವಾಮಿಯವರಿಗೆ ಸಮಾಜ ಸೇವಾ ಭಾರ್ಗವ ಪ್ರಶಸ್ತಿ ಪ್ರಧಾನ.

Vijayanagara Vani
ಗಂಗಾಧರ ಸ್ವಾಮಿಯವರಿಗೆ ಸಮಾಜ ಸೇವಾ ಭಾರ್ಗವ ಪ್ರಶಸ್ತಿ ಪ್ರಧಾನ.

ಪಟ್ಟಣ ಸಮೀಪದ ಕ್ಯಾದಿಗೆಹಾಳ್ ಗ್ರಾಮದ ಬೃಹನ್ ಮಠದ ಎಂ.ಗಂಗಾಧರಸ್ವಾಮಿರವರ ಧಾರ್ಮಿಕ, ಸಾಮಾಜಿಕ, ಸಾಂಸ್ಕøತಿಕ ಸೇವೆಯನ್ನು ಗುರುತಿಸಿ ಹೊಸಪೇಟೆಯ ಸಂಗೀತ ಭಾರತಿ ಸಂಸ್ಥೆ ವತಿಯಿಂದ ಸಮಾಜ ಸೇವಾ ಭಾರ್ಗವ ರಾಜ್ಯ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಸಂದರ್ಭದಲ್ಲಿ

ವೇ.ಮೂ. ಎಂ.ಎಸ್.ಶಶಿಧರಶಾಸ್ತ್ರಿ ಮಾತನಾಡಿ, ಕ್ಯಾದಿಗೆಹಾಳ್ ಗ್ರಾಮದ ಎಂ.ಗಂಗಾಧರ ಸ್ವಾಮಿ ರವರು ಎಂಟು ವರ್ಷಗಳಿಂದ ಸತತವಾಗಿ ಧಾರ್ಮಿಕ, ಸಾಮಾಜಿಕ, ಸಾಂಸ್ಕøತಿಕ ಹಾಗೂ ಜನರ ಕಷ್ಟಗಳಿಗೆ ಸ್ಪಂದಿಸುವ ಮೂಲಕ ಸಮಾಜ ಸೇವೆ ಮಾಡುತ್ತಾ ಬಂದಿದ್ದಾರೆ. ಇಂತಹ ಮಹನ್ ಪುರುಷರಿಗೆ ಇಂತಹ ಪ್ರಶಸ್ತಿ ನೀಡಿರುವುದು ನಿಜಕ್ಕೂ ಶ್ಲಾಘನೀಯ ಎಂದರು.

ಕಾರ್ಯಕ್ರದ ಅಧ್ಯಕ್ಷತೆ ವಹಿಸಿದ್ದ ಸಂಗೀತ ಭಾರತಿ ಸಂಸ್ಥೆಯ ಅಧ್ಯಕ್ಷ ಹೆಚ್.ಪಿ.ಕಲ್ಲಂಭಟ್ ಮಾತನಾಡಿದರು ಸಂದರ್ಭದಲ್ಲಿ ಎಸ್.ಡಿ.ಬಸವರಾಜ, ಮೃತ್ಯುಂಜಯ್ಯ, ವೀರಯ್ಯ, ಬಂಗಿ ದೊಡ್ಡಮಂಜುನಾಥ ಸೇರಿದಂತೆ ಇತರರು ಇದ್ದರು

 

WhatsApp Group Join Now
Telegram Group Join Now
Share This Article
error: Content is protected !!