Advertisement
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬಳ್ಳಾರಿಯಲ್ಲಿ ರಾಜ್ಯಮಟ್ಟದ ಆಯುರ್ವೇದ ಶೈಕ್ಷಣಿಕ ಸಂವಾದ

ಬಳ್ಳಾರಿ,ಜು.23.
ನಗರದ ತಾರಾನಾಥ ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಸುವರ್ಣ ಸಂಭ್ರಮದ ಅಂಗವಾಗಿ ‘ಬಸ್ತಿ – ಅರ್ಧ ಚಿಕಿತ್ಸೆಯೇ ಅಥವಾ ಪೂರ್ಣ ಚಿಕಿತ್ಸೆಯೇ?’ ಎಂಬ ವಿಷಯದ ಕುರಿತು ರಾಜ್ಯಮಟ್ಟದ ಶೈಕ್ಷಣಿಕ ಸಂವಾದವನ್ನು (ಸಂಶೋಧನಾ ಚರ್ಚೆ) ಶುಕ್ರವಾರ ಆಯೋಜಿಸಲಾಗಿತ್ತು.
ರಾಜ್ಯದ ವಿವಿಧ 25 ಆಯುರ್ವೇದ ಮಹಾವಿದ್ಯಾಲಯಗಳಿಂದ ಆಗಮಿಸಿದ್ದ ಪಂಚಕರ್ಮ ಸ್ನಾತಕೋತ್ತರ ವಿದ್ಯಾರ್ಥಿಗಳು, ಆಯುರ್ವೇದದ ಮೂಲ ಸಿದ್ಧಾಂತಗಳು ಹಾಗೂ ಆಧುನಿಕ ವೈಜ್ಞಾನಿಕ ದೃಷ್ಟಿಕೋನಗಳನ್ನು ಆಧಾರವಾಗಿಟ್ಟುಕೊಂಡು ತಮ್ಮ ವೈಚಾರಿಕ್ ನಂಬಿಕೆ ಮತ್ತು ಅಭಿಪ್ರಾಯಗಳನ್ನು ವಾಗ್ವಾದದ ಮೂಲಕ ಮಂಡಿಸಿದರು.
*ವಿಮರ್ಶಾತ್ಮಕ ಚಿಂತನೆಗೆ ವೇದಿಕೆ:*
ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನಾಡಿದ ಡಾ. ಸಂತೋಷ್ ಎಲ್. ಯಡಹಳ್ಳಿ ಅವರು, ‘ಆಯುರ್ವೇದದ ಮೂಲತತ್ವಗಳ ಕುರಿತು ವಿದ್ಯಾರ್ಥಿಗಳಲ್ಲಿ ವಿಮರ್ಶಾತ್ಮಕ ಚಿಂತನೆ ಹಾಗೂ ಸಂಶೋಧನಾ ಮನೋಭಾವವನ್ನು ಬೆಳೆಸುವ ಉದ್ದೇಶದಿಂದ ಈ ಶೈಕ್ಷಣಿಕ ಸಂವಾದವನ್ನು ಆಯೋಜಿಸಲಾಗಿದೆ,’ ಎಂದು ವಿಷಯದ ಮಹತ್ವ ವಿವರಿಸಿದರು.
ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ರಾಜಶೇಖರ್ ಎಸ್. ಗಾಣಿಗೇರ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂತಹ ಚರ್ಚಾ ಸ್ಪರ್ಧೆಗಳು ವಿದ್ಯಾರ್ಥಿಗಳಲ್ಲಿ ವಿಷಯದ ಆಳವಾದ ಅರಿವು, ಆತ್ಮವಿಶ್ವಾಸ ಮತ್ತು ವೈಜ್ಞಾನಿಕ ಚರ್ಚೆಯ ಸಂಸ್ಕೃತಿಯನ್ನು ಬೆಳೆಸುತ್ತವೆ. ಕಾಲೇಜಿನ ಸುವರ್ಣ ಮಹೋತ್ಸವದ ಭಾಗವಾಗಿ ನಡೆದ ಈ ಕಾರ್ಯಕ್ರಮವು ರಾಜ್ಯದ ವಿವಿಧ ವೈದ್ಯಕೀಯ ಸಂಸ್ಥೆಗಳ ನಡುವೆ ಶೈಕ್ಷಣಿಕ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗಳಿಸಿದೆ ಎಂದರು.
*ಸ್ಪರ್ಧೆಯ ವಿಜೇತರು:*
ಸಂವಾದದ ತೀರ್ಪುಗಾರರಾಗಿ ಡಾ. ವಿನಯಕುಮಾರ್ ಹಾಗೂ ಡಾ. ಅಶ್ವಿನ್ ಕುಮಾರ್ ಕಾರ್ಯನಿರ್ವಹಿಸಿದರು.
*ಪ್ರಥಮ ಸ್ಥಾನ:* ‘ಮೇಧಾ' ತಂಡ (ಮಾರ್ಗದರ್ಶಕರು: ಡಾ. ರಶ್ಮಿ)
*ದ್ವಿತೀಯ ಸ್ಥಾನ:* ‘ವಿವೇಕ' ತಂಡ (ಮಾರ್ಗದರ್ಶಕರು: ಡಾ. ಜೈರಾಜ್ ಬಸರಿಗಿಡದ)
ಕಾರ್ಯಕ್ರಮದ ಸಂವಾದದ ರಾಜ್ಯಮಟ್ಟದ ಕಾರ್ಯದರ್ಶಿಯಾಗಿ ಡಾ. ಸಂತೋಷ್ ಎಲ್. ಯಡಹಳ್ಳಿ ಹಾಗೂ ಸಹ-ಕಾರ್ಯದರ್ಶಿಯಾಗಿ ಡಾ. ಶಿಲ್ಪಶ್ರೀ ಇಡೀ ಸಂವಾದ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಡೆಸಿಕೊಟ್ಟರು. ಡಾ. ನಂದಿನಿ ಹಿರೇಮಠ ಅವರು ಅತಿಥಿಗಳನ್ನು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸಹ-ಕಾರ್ಯದರ್ಶಿ ಡಾ. ವಿಜಯ ಮಹಾಂತೇಶ್ ಹೂಗಾರ್ ವಂದಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಆಯುರ್ವೇದ ಕಾಲೇಜುಗಳ ಅಧ್ಯಾಪಕರು, ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ ಆಯುರ್ವೇದ ಕ್ಷೇತ್ರದ ಗಣ್ಯರು ಭಾಗವಹಿಸಿದ್ದರು.
-----------
See less

Author
Publisher and Editor: Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬಳ್ಳಾರಿಯಲ್ಲಿ ಹದಿಹರೆಯದ ಹೆಣ್ಣುಮಕ್ಕಳ ಸಮಾವೇಶ ಮತ್ತು ಜಿಲ್ಲಾ ಮಟ್ಟದ ಜಾಥಾ ಬಾಲ್ಯ ವಿವಾಹ ಆತಂಕಕಾರಿ, ಮದುವೆಗೆ ದೈಹಿಕ ಮಾನಸಿಕ ಪಕ್ವತೆ ಅಗತ್ಯ: ನ್ಯಾಯಾಧೀಶ ಸಿದ್ಧಲಿಂಗ ಪ್ರಭು ಅಭಿಪ್ರಾಯಸಂಡೂರು: ಭಾಗ್ಯಲಕ್ಷಿö್ಮ ಯೋಜನೆಯ ಪರಿಪಕ್ವ ಮೊತ್ತ ಪಾವತಿಗೆ ಪ್ರಸ್ತಾಪನೆ ಸಲ್ಲಿಕೆಗೆ ಆಹ್ವಾನಬಳ್ಳಾರಿಯಲ್ಲಿ ರಾಜ್ಯಮಟ್ಟದ ಆಯುರ್ವೇದ ಶೈಕ್ಷಣಿಕ ಸಂವಾದಬಳ್ಳಾರಿಯಲ್ಲಿ ರಾಜ್ಯಮಟ್ಟದ ಆಯುರ್ವೇದ ಶೈಕ್ಷಣಿಕ ಸಂವಾದಅನುಚಿತ ವ್ಯಾಪಾರ ನೀತಿ ಅನುಸರಿಸಿದ ವಿಮಾ ಕಂಪನಿಗೆ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ದಂಡ ವಿಧಿಸಿದ ಜಿಲ್ಲಾ ಗ್ರಾಹಕ ಆಯೋಗಬಳ್ಳಾರಿಯಲ್ಲಿ ಕಲಾ ವೈಭವದ ‘ಯುವ ಸೌರಭ’: ಸಂಸ್ಕೃತಿಯ ಅನಾವರಣ ಕಲೆ, ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡಿ: ಶ್ರದ್ಧೆ-ಭಕ್ತಿಯಿಂದ ಸಾಧನೆ ಸಾಧ್ಯ – ಮೇಯರ್ ಪಿ.ಗಾದೆಪ್ಪ ಕರೆವಿಶಿಷ್ಟ ಕೊಪ್ಪಳ ಜಾನುವಾರು ಜರ್ಮಪ್ಲಾಸಂನ ವೈಜ್ಞಾನಿಕ ದಾಖಲೀಕರಣಕ್ಕಾಗಿ ಜಿಲ್ಲೆಗೆ ಆಗಮಿಸಿದ ವಿಜ್ಞಾನಿಗಳ ತಂಡಡಿಮ್ಹಾನ್ಸ್‍ನಲ್ಲಿ ಜರುಗಿದ ವಿಶ್ವ ಮೆದುಳು ದಿನ ಕಾರ್ಯಕ್ರಮ*15 ರಂದು ಸ್ವಾತಂತ್ರ್ಯ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲು ಸಕಲ ಸಿದ್ಧತೆಗೆ ಸೂಚನೆ* *ಡಾ. ಕುಮಾರ*ಪಂಚ ಗ್ಯಾರಂಟಿ ಪ್ರಗತಿ ಪರಿಶೀಲನಾ ಸಭೆ ಯಲ್ಲಿ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ. ಶಿವಮೂರ್ತಿ ಮೃತರ ಖಾತೆಗೆ ಗೃಹಲಕ್ಷ್ಮಿ ಹಣ: ತಡೆಗೆ ಸೂಚನೆ