Advertisement
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಹೀರೆಕಾಯಿ ಚಟ್ನಿ.. ಸಿಂಪಲ್ ರೆಸಿಪಿ ಸಖತ್ ರುಚಿ

ಊಟ ತಿಂಡಿ ಯಾವುದಕ್ಕೆ ಆಗಿರಲಿ ಅದರ ಜೊತೆ ಯಾವುದಾದರೊಂದು ಚಟ್ನಿ ಇದ್ದರೆ ಅದರ ರುಚಿಯೇ ಬೇರೆ. ಊಟ, ತಿಂಡಿ ಚೆನ್ನಾಗಿ ಸೇರಬೇಕು ಅಂದ್ರೆ ಚಟ್ನಿ ಇರಬೇಕು. ಎಲ್ಲಾ ಚಟ್ನಿಗಳು ರುಚಿ ಎಲ್ಲರಿಗೂ ಇಷ್ಟವಾಗುತ್ತವೆ ಅಥವಾ ರುಚಿ ನೀಡುತ್ತವೆ ಎಂದು ಹೇಳಲಾಗದು. ಕೆಲವೊಂದು ಚಟ್ನಿ ಮಾತ್ರ ಎಲ್ಲರಿಗೂ ಇಷ್ಟವಾಗುತ್ತದೆ

ಹೀಗಾಗಿ ನಾವಿಂದು ಹೀರೇಕಾಯಿ ಚಟ್ನಿ ಮಾಡುವ ಕುರಿತು ಹೇಳಲಿದ್ದವೆ. ಈ ಹೀರೆಕಾಯಿ ಆರೋಗ್ಯದ ದೃಷ್ಟಿಯಿಂದ ತುಂಬಾನೆ ಒಳ್ಳೆಯ ತರಕಾರಿಯಾಗಿದೆ. ನಿಮಗೆ ಕಣ್ಣಿಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದರೂ ನಿಮ್ಮ ಆಹಾರದಲ್ಲಿ ಹೀರೆಕಾಯಿಯನ್ನು ತಪ್ಪದೇ ಸೇವಿಸಿದರೆ ಅದು ದೂರಾಗಲಿದೆ ಎಂದು ಹೇಳಲಾಗಿದೆ. ಹೀರೆಕಾಯಿಯಲ್ಲಿ ವಿಟಮಿನ್ ಎ ಪೂರಕ ಅಂಶಗಳಿದ್ದ ಕೂಡಿದ್ದು ಹೀಗಾಗಿ ಆರೋಗ್ಯಕ್ಕೆ ಇದು ಬಹಳ ಉತ್ತಮ.

ಇತ್ತ ಹೀರೆಕಾಯಿ ಚಟ್ನಿ ಸಿಕ್ಕಾಪಟ್ಟೆ ರುಚಿ ನೀಡುವ ಕಾರಣ ಎಲ್ಲರಿಗೂ ಇಷ್ಟವಾಗುತ್ತೆ. ಒಮ್ಮೆ ತಿಂದವರು ಮತ್ತೆ ಹೀರೆಕಾಯಿ ನೋಡಿದರೆ ಅದರ ಚಟ್ನಿ ನೆನಪಿಸುತ್ತಾರೆ. ಹಾಗಾದ್ರೆ ಈ ಹೀರೆಕಾಯಿ ಚಟ್ನಿ ಮಾಡಲು ಯಾವೆಲ್ಲಾ ಪದರ‍್ಥಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ. ಹೀರೆಕಾಯಿ ಚಟ್ನಿ ಮಾಡುವುದು ಹೇಗೆ? ಹೀರೆಕಾಯಿ ಈರುಳ್ಳಿ ಹಸಿ ಮೆಣಸು ಶೇಂಗಾ ಬೀಜ (2 ಸ್ಪೂನ್ ಅಷ್ಟು ಹುರಿದುಕೊಳ್ಳಿ) ಅರಶಿಣ ಹುಣಸೆ ಹುಳಿ ಉಪ್ಪು ಎಣ್ಣೆ ಕೊತ್ತಂಬರಿ ಕರಿಬೇವು ಜೀರಿಗೆ ಹೀರೆಕಾಯಿ ಚಟ್ನಿ ಮಾಡುವುದು ಹೇಗೆ

ಮೊದಲು ಹೀರೆಕಾಯಿ ತೆಗೆದುಕೊಂಡು ಅದರ ಸಿಪ್ಪೆ ತೆಗೆದುಕೊಳ್ಳಬೇಕು. ಹೀರೆಕಾಯಿಯ ಮೇಲ್ಮೇಲಿನ ಸಿಪ್ಪೆಯನ್ನು ಸಣ್ಣದಾಗಿ ತೆಗೆದುಕೊಳ್ಳಿ. ಹೀರೆಕಾಯಿ ಗೆರೆಗಳು ಹೋಗುವಷ್ಟು ಸಿಪ್ಪೆ ತೆಗೆಯಿರಿ. ಬಳಿಕ ಹೀರೆಕಾಯಿಯನ್ನು ಸಣ್ಣದಾಗಿ ಹೆಚ್ಚಿಕೊಳ್ಳಿ. ಇದಾದ ಬಳಿಕ ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಳ್ಳಿ. ಎಣ್ಣೆ ಕಾದ ಬಳಿಕ ಹೆಚ್ಚಿಕೊಂಡಿರುವ ಹೀರೆಕಾಯಿಯನ್ನು ಹಾಕಿ ಕೊಂಡು ಫ್ರೈ ಮಾಡಬೇಕು. ಸುಮಾರು 3 ನಿಮಿಷ ಫ್ರೈ ಮಾಡಿಕೊಂಡ ಬಳಿಕ ಹಸಿಮೆಣಸು ಹಾಕಿಕೊಳ್ಳಿ. 3 ನಿಮಿಷ ಬಿಟ್ಟಿ ಅದಕ್ಕೆ ಈರುಳ್ಳಿ ಹಾಕಿ ಫ್ರೈ ಮಾಡಿ. 2 ನಿಮಿಷ ಫ್ರೈ ಮಾಡಿದ ಬಳಿಕ ಅದಕ್ಕೆ ಬೆಳ್ಳುಳ್ಳಿ. ಕರಿಬೇವು, ಜೀರಿಗೆ, ಅರಶಿಣ, ಹುಣಸೆ ಹುಳಿ ಹಾಕಿ ಫ್ರೈ ಮಾಡಿ. ಒಟ್ಟು 5 ನಿಮಿಷ ಫ್ರೈ ಆದರೆ ಸಾಕು. ಎಲ್ಲಾ ಫ್ರೈ ಆದ ಬಳಿಕ ಅದಕ್ಕೆ ಕೊತ್ತಂಬರಿ ಹಾಕಿ ಒಲೆ ಆಫ್ ಮಾಡಿಕೊಳ್ಳಿ. ಬಳಿಕ ಇದನ್ನು ತಣ್ಣಗಾಗಲು ಬಿಡಿ.

ಇದು ತಣ್ಣಗಾದ ಬಳಿಕ ಅದನ್ನೆಲ್ಲಾ ತೆಗೆದುಕೊಂಡು ಅದನ್ನು ಒಂದು ಮಿಕ್ಸಿ ಜರ‍್ಗೆ ಹಾಕಿಕೊಳ್ಳಿ. ಈ ವೇಳೆ ಮೊದಲೆ ಹುರಿದುಕೊಂಡಿರುವ ಶೇಂಗಾ ಬೀಜ ಹಾಗೂ ಉಪ್ಪು ಹಾಕಿಕೊಂಡು ನೀರು ಹಾಕಿಕೊಳ್ಳದೆ ರುಬ್ಬಿಕೊಳ್ಳಬೇಕು. ನುಣ್ಣಗೆ ರುಬ್ಬಿಕೊಳ್ಳುವ ಬದಲು ತರಿ ತರಿಯಾಗಿ ರುಬ್ಬಿಕೊಳ್ಳಬೇಕು. ಇಷ್ಟಾದರೆ ನಿಮ್ಮ ಮುಂದೆ ಹೀರೆಕಾಯಿ ಚಟ್ನಿ ರೆಡಿಯಾಗಿರುತ್ತದೆ. ಇದು ಅನ್ನ, ಚಪಾತಿ, ಇಡ್ಲಿ, ದೋಸೆಗೆ ಸಿಕ್ಕಾಪಟ್ಟೆ ರುಚಿ ನೀಡಲಿದೆ. ಜೊತೆಗೆ ಇದಕ್ಕೆ ನೀರು ಹಾಕದೆ ಮಾಡುವುದರಿಂದ ಹಲವು ದಿನಗಳ ಕಾಲ ಫ್ರಿಡ್ಜ್ನಲ್ಲಿಟ್ಟು ಸವಿಯಬಹುದು. ಜೊತೆಗೆ ಹೀರೆಕಾಯಿ ಕಫ ಮತ್ತು ಪಿತ್ತವನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ. ಹೀರೆಕಾಯಿಯನ್ನು ನಿಯಮಿತವಾಗಿ ಸೇವಿಸುವುದರಿಂದ ಉದರಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.

Author
Publisher and Editor: Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಪಾರ್ಟ್ ಮೆಂಟ್ ನಿವಾಸಿಗಳ ಹಕ್ಕು ರಕ್ಷಣೆಗೆ ಸರ್ಕಾರ ಬದ್ಧ: ಸಿಎಂ ಡಿ ಕೆ ಶಿವಕುಮಾರ್* *ಆಗಸ್ಟ್ 6 ರವರೆಗೆ ಸಲಹೆ ಸೂಚನೆಗಳನ್ನು ‌ನೀಡಲು ಅವಕಾಶ* *ನನ್ನ ಹೆಸರನ್ನೇ ನೋಟಿಸ್ ಬೋರ್ಡ್ ನಲ್ಲಿ ಹಾಕಿದ್ದರು* *ಎಸ್ ಟಿಪಿ, ಕುಡಿಯುವ ನೀರಿನ ಬಗ್ಗೆ ಗಮನ ಹರಿಸಿ* *ಹೈ ರೈಸ್ ಕಟ್ಟಡಗಳ ನಿರ್ಮಾಣಕ್ಕೆ ಒತ್ತು* *ಬೆಂಗಳೂರು ಭಾರತದ ಹೃದಯ*ಆರೋಗ್ಯ ಇಲಾಖೆಯಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಭಾರತದ ಮೊದಲ ಸರ್ಕಾರಿ ಪ್ರಾಯೋಜಿತ ಕೃತಕ ಬುದ್ಧಿಮತ್ತೆ ವಿಶ್ವವಿದ್ಯಾಲಯ ಘೋಷಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ವಿಶ್ವ ಜನಸಂಖ್ಯಾ ದಿನಾಚರಣೆಯಲ್ಲಿ ಡಾ.ಯಲ್ಲಾ ರಮೇಶ್‌ಬಾಬು ಕರೆ ಜನಸಂಖ್ಯೆ ಸ್ಥಿರತೆಗೆ ಸಮುದಾಯದ ಪಾತ್ರ ಮುಖ್ಯಎಸ್‌ಐಆರ್: ಕೊಪ್ಪಳ ಜಿಲ್ಲೆಯಲ್ಲಿ ಜುಲೈ 14 ರವರೆಗೆ 6,71,803 ಗಣತಿ ನಮೂನೆಗಳ ಡಿಜಿಟಲೀಕರಣಭಿನ್ನಾಭಿಪ್ರಾಯ ಮರೆತು ಒಂದಾದ 15 ದಂಪತಿಗಳು: ಕುಟುಂಬ ನ್ಯಾಯಾಲಯದ ಯಶಸ್ವಿ ರಾಜಿ ಸಂಧಾನಜುಲೈ 13 ರಂದು ಬಳ್ಳಾರಿಯ ವಿವಿಧೆಡೆ ವಿದ್ಯುತ್ ಕಡಿತಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ: ಬಳ್ಳಾರಿ ಜಿಲ್ಲೆಯಲ್ಲಿ ಶೇ. 97.26 ರಷ್ಟು ಎಸ್.ಐ.ಆರ್ ಗಣತಿ ನಮೂನೆ ವಿತರಣೆ, ಮನೆ ಮನೆ ಸಮೀಕ್ಷೆ ಚುರುಕುಅಪರಾಧ ಪ್ರಕರಣಗಳಲ್ಲಿ ನ್ಯಾಯಾಲಯದಿಂದ ವಿಲೇವಾರಿಗೊಂಡಂತಹ ವಾಹನಗಳ ಹರಾಜುಕ್ಷಯಮುಕ್ತ ಬಳ್ಳಾರಿ ಜಿಲ್ಲೆಯನ್ನಾಗಿಸಲು ಸಾರ್ವಜನಿಕರು ಕೈಜೋಡಿಸಿ