Ad image

ಕೊಟ್ಟೂರಿನಲ್ಲಿ ವರುಣಾರ್ಭಟ, ಕೆರೆಯಂತಾದ ಬಸ್ ನಿಲ್ದಾಣ

Vijayanagara Vani
ಕೊಟ್ಟೂರಿನಲ್ಲಿ ವರುಣಾರ್ಭಟ, ಕೆರೆಯಂತಾದ ಬಸ್ ನಿಲ್ದಾಣ
ಕೊಟ್ಟೂರು : ಪಟ್ಟಣದಲ್ಲಿ ಬುಧವಾರ ಮಧ್ಯಾಹ್ನ ಗುಡುಗು ಸಿಡಿಲು ಸಹಿತ ಭಾರಿ ಮಳೆಯಾಗಿ ಇಲ್ಲಿನ ಬಸ್ ನಿಲ್ದಾಣ ಅಕ್ಷರ ಸಹ ಕೆರೆಯಂತಾಯಿತು.
 ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣದಿಂದ ಕೂಡಿದ್ದರಿಂದ ಮಳೆ ಬರುವ ಮುನ್ಸೂಚನೆ ದಟ್ಟವಾಗಿದ್ದರಿಂದ ಅಪರಾಹ್ನ 3:30ರಿಂದ ಭಾರಿ ಬಿರುಗಾಳಿಯೊಂದಿಗೆ ಆರಂಭಗೊಂಡ ವರುಣ ಗುಡುಗು ಸಿಡಿಲಿನ ಆರ್ಭಟದೊಂದಿಗೆ ಧೋ ಎಂದು ಸುರಿಯುತು.
 ರಣಬಿಸಿಲಿಗೆ ಕಂಗೆಡ್ಡಿದ್ದ  ಜನತೆಗೆ  ಸುಮಾರು ಅರ್ಧ ತಾಸುಗಳ ಕಾಲ ಮಳೆರಾಯ ತಂಪೆರೆದನು.
 ಪ್ರತಿ ಬಾರಿ ಮಳೆ ಬಂದಾಗಲೂ ಕೊಟ್ಟೂರಿನ ಕೇಂದ್ರ ಬಸ್ ನಿಲ್ದಾಣದಲ್ಲಿ ಮಳೆ ನೀರು ನಿಂತು ಕೆರೆಯಂತಾಗಿ ಮಾರ್ಪಟ್ಟು ಚರಂಡಿ ನೀರು ಸಹ ಸೇರಿ ಸುಮಾರು ತಾಸುಗಳ ಕಾಲ ಹೊಲಸು ನೀರಿನಿಂದ ತುಂಬಿ ಹೋಗಿತ್ತು 
 ಇದರಿಂದ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಿದರು. ಬಿಸಿಲ ಬೇಗೆಗೆ ನಲುಗಿ ಹೋಗಿದ್ದ ಜನತೆ ಕೊನೆಗೂ ನಿಟ್ಟಿಸಿರು ಬಿಟ್ಟರು.

Share This Article
error: Content is protected !!
";