ಬಳ್ಳಾರಿ,ಜು30
2026-27 ನೇ ಸಾಲಿನ ಮುಂಗಾರು ಹಂಗಾಮಿನ ಕೃಷಿ ಬೆಳೆಗಳಿಗೆ ವಿಮೆ ನೋಂದಣಿ ಮಾಡಲು ಪ್ರಾರಂಭವಾಗಿದ್ದು, ಬಳ್ಳಾರಿ ಹಾಗೂ ಕುರುಗೋಡು ತಾಲ್ಲೂಕಿನ ರೈತರು ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯಡಿ ವಿವಿಧ ಕೃಷಿ ಬೆಳೆಗಳಿಗೆ ಬೆಳೆ ವಿಮೆ ಮಾಡಿಸಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ ಎಂದು ತಾಲೂಕು ಸಹಾಯಕ ಕೃಷಿ ನಿರ್ದೇಶಕ ಗರ್ಜಪ್ಪ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಮೆ ನೋಂದಣಿ ಮಾಡಿಸುವುದರಿಂದ ರೈತರಿಗೆ ನೈಸರ್ಗಿಕ ಪ್ರಕೃತಿ ವಿಕೋಪಗಳಿಂದಾಗಿ ಬೆಳೆ ಹಾನಿಯಾದರೆ, ವಿಮಾ ಯೋಜನೆಯಿಂದ ರೈತರಿಗೆ ಬಹಳಷ್ಟು ಅನುಕೂಲವಾಗಲ್ಲಿದ್ದು, ನೊಂದಣಿಗಾಗಿ ವಿವಿಧ ಬೆಳೆಗಳಿಗೆ ಒಂದು ಎಕರೆಗೆ ವಿವಿಧ ಬೆಲೆ ನಿಗದಿ ಪಡಿಸಲಾಗಿದೆ. ಮಳೆಯಾಶ್ರಿತ ಸೂರ್ಯಕಾಂತಿ ಬೆಳೆಗೆ 90ರೂ., ನೀರಾವರಿ ಸೂರ್ಯಕಾಂತಿ ಬೆಳೆಗೆ 469 ರೂ., ಮಳೆಯಾಶ್ರಿತ ಹಾಗೂ ನೀರಾವರಿ ಹತ್ತಿಗೆ ಕ್ರಮವಾಗಿ 1208ರೂ ಹಾಗೂ 1748ರೂ, ನೀರಾವರಿ ಮುಸುಕಿನ ಜೋಳ 617ರೂ, ಮಳೆಯಾಶ್ರಿತ ಮುಸುಕಿನ ಜೋಳ 546 ರೂ, ಮಳೆಯಾಶ್ರಿತ ಹಾಗೂ ನೀರಾವರಿ ಜೋಳ ಬೆಳೆಗೆ 359ರೂ ಹಾಗೂ 426 ರೂ.ಇರುತ್ತದೆ.
ಬೆಳೆಗಳಿಗೆ ವಿಮೆ ನೋಂದಣಿ ಮಾಡಲು ಜುಲೈ 31 ಕೊನೆ ದಿನ ವಾಗಿರುತ್ತದೆ.
ನೀರಾವರಿ ಭತ್ತ ಎಕರೆಗೆ 879 ರೂ, ಮಳೆಯಾಶ್ರಿತ ಬೆಳೆಗಳಾದ ಸಜ್ಜೆ 282 ರೂ, ನವಣೆ 261 ರೂ, ತೊಗರಿ 466 ರೂ, ಹುರುಳಿ 380 ರೂ ಹಾಗೂ ನೆಲಗಡಲೆ ಅಥವಾ ಶೇಂಗಾ 529 ರೂ ಮತ್ತು ನೀರಾವರಿ ಬೆಳೆಗಳಾದ ತೊಗರಿ 488 ರೂ., ಸಜ್ಜೆ 350 ರೂ ಇದ್ದು, ನೋಂದಣಿ ಮಾಡಲು ಆಗಸ್ಟ್ 14 ರಂದು ಕೊನೆಯ ದಿನ ವಾಗಿರುತ್ತದೆ..
ಬೆಳೆಗಳ ವಿಮೆ ನೋಂದಣಿ ಹೋಬಳಿ ಹಾಗೂ ಗ್ರಾಮ ಪಂಚಾಯತಿಗಳಿಗೆ ನಿಗದಿಪಡಿಸಿದ್ದು, ನಿಗದಿತ ಘಟಕದಲ್ಲಿ ಬೆಳೆ ನೋಂದಣಿ ಮಾಡಲಾಗುವುದು.
ಬೆಳೆ ವಿಮೆ ನೊಂದಣಿಗಾಗಿ ಹತ್ತಿರದ ಸಾಮಾನ್ಯ ಸೇವಾ ಕೇಂದ್ರ ಅಥವಾ ಗ್ರಾಮಒನ್ ಕೇಂದ್ರ ಅಥವಾ ರೈತರು ತಮ್ಮ ವ್ಯವಹಾರದ ಬ್ಯಾಂಕ್ಗಳಿಗೆ ಸಂಪರ್ಕಿಸಿ ಬೆಳೆ ವಿಮೆ ಮಾಡಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೆÃರಿಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ.
