ಬಳ್ಳಾರಿ,ಸೆ.01
ಕಂಪ್ಲಿಯಲ್ಲಿನ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಬಳ್ಳಾರಿ ಜಿಲ್ಲೆಯ ಪರಿಶಿಷ್ಟ ಜಾತಿ ವರ್ಗದ ರೈತರಿಗಾಗಿ ಕೃಷಿ ಉಪಕರಣಗಳ ದುರಸ್ತಿ ಹಾಗೂ ನಿರ್ವಹಣೆ ಕುರಿತು 3 ದಿನಗಳ ಉಚಿತ ಸಾಂಸ್ಥಿಕ ತರಬೇತಿಯನ್ನು ಆಯೋಜಿಸಲಾಗಿದೆ.
ಸೆಪ್ಟೆಂಬರ್ 08 ರಿಂದ 10 ರವರೆಗೆ (ಮೂರು ದಿನಗಳ) ತರಬೇತಿ ನಡೆಯಲಿದ್ದು, ಭಾಗವಹಿಸುವ ರೈತರಿಗೆ ಉಚಿತ ಊಟ, ವಸತಿ ಸೌಲಭ್ಯದೊಂದಿಗೆ ಸಾರಿಗೆ ವೆಚ್ಚವನ್ನೂ ನೀಡಲಾಗುತ್ತದೆ. ಆಸಕ್ತ ಪರಿಶಿಷ್ಟ ಜಾತಿ ವರ್ಗದ ರೈತರು ತಮ್ಮ ಹೆಸರನ್ನು ಮುಂಚಿತವಾಗಿ ನೋಂದಾಯಿಸಿಕೊಳ್ಳಲು ಕೋರಲಾಗಿದೆ.
ಹೆಸರು ನೋಂದಣಿಗೆ ಯೇಸುಬಾಬು (ಕೃಷಿ ಅಧಿಕಾರಿ)-6360645255, ನವ್ಯ ಪ್ರಶಾಂತ್ (ಕೃಷಿ ಅಧಿಕಾರಿ)-6360139316, ನಾಜನೀನ್ ನದಾಫ್ (ಸಹಾಯಕ ಕೃಷಿ ನಿರ್ದೇಶಕರು)- 9448265898 ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಕಂಪ್ಲಿಯ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-----------