ವಿಜಯನಗರ(ಹೊಸಪೇಟೆ)ಆ.13:
ಜಿಲ್ಲೆಯಲ್ಲಿ ತೋಟಗಾರಿಕೆ ಕ್ಷೇತ್ರ ಮತ್ತು ನರ್ಸರಿಗಳಲ್ಲಿ ಉತ್ತಮ ಗುಣಮಟ್ಟದ ಕಸಿ, ಸಸಿಗಳನ್ನು ಉತ್ಪಾದಿಸಿ ರೈತರಿಗೆ ಇಲಾಖಾ ನಿಗದಿತ ದರಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ತೋಟಗಾರಿಕೆ ಇಲಾಖೆಯ ವಿವಿಧ ತೋಟಗಾರಿಕೆ ಕ್ಷೇತ್ರಗಳಿಂದ ಉತ್ತಮ ಗುಣಮಟ್ಟದ ತೆಂಗಿನ ಸಸಿಗಳು, ಮಾವು, ಸಪೋಟ, ಪೇರಲ, ನಿಂಬೆ, ಕರಿಬೇವು, ನೇರಳೆ ಮತ್ತು ನುಗ್ಗೆ ಹಾಗೂ ವಿವಿಧ ಅಲಂಕಾರಿಕ ಸಸಿಗಳು ಮಾರಾಟಕ್ಕೆ ಲಭ್ಯವಿದ್ದು ಜಿಲ್ಲೆಯ ರೈತ ಹಾಗೂ ಸಾರ್ವಜನಿಕರು ಖರೀದಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ನಾಗತೀಬಸಾಪುರ ತೋಟಗಾರಿಕೆ ಕ್ಷೇತ್ರ ಹೂವಿನಹಡಗಲಿ ತಾಲೂಕು: ಮೊ.ಸಂ: 9686508432, 9148297982, ಮಾಲವಿ ತೋಟಗಾರಿಕೆ ಕ್ಷೇತ್ರ, ಹಗರಿಬೊಮ್ಮನಹಳ್ಳಿ ತಾಲೂಕು: 9880367794, 8495882552, 9900775894, ಬುಕ್ಕಸಾಗರ ತೋಟಗಾರಿಕೆ ಕ್ಷೇತ್ರ ಹೊಸಪೇಟೆ ತಾಲ್ಲೂಕು: 9591521042, ಕೊಟ್ಟೂರು ತೋಟಗಾರಿಕೆ ಕ್ಷೇತ್ರ ಕೊಟ್ಟೂರು ತಾಲೂಕು: 9663832857, ಕೆ.ಕಲ್ಲಹಳ್ಳಿ ತೋಟಗಾರಿಕೆ ಕ್ಷೇತ್ರ ಹರಪನಹಳ್ಳಿ ತಾಲೂಕು: 7892383890, ಆನಂದ ದೇವನಹಳ್ಳಿ ತೋಟಗಾರಿಕೆ ಕ್ಷೇತ್ರ ಹಗರಿಬೊಮ್ಮನಹಳ್ಳಿ ತಾಲೂಕು: 9742968270, ಚಿಕ್ಕಜೋಗಿಹಳ್ಳಿ ತೋಟಗಾರಿಕೆ ಕ್ಷೇತ್ರ ಕೂಡ್ಲಿಗಿ ತಾಲ್ಲೂಕು: 9483923322 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
