Advertisement
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಪಟ್ಟಣದ ಮೇಗಳಪೇಟೆಯಲ್ಲಿ ಶುಕ್ರವಾರ ಶ್ರೀ ಆದಿ ಶಕ್ತಿ ಮಹಾತಾಯಿ ಸ್ವರೂಪವಾದ ಅಮ್ಮನವರ ಪೂಜೆಯ ಜೊತೆಗೆ ಅಜ್ಜಮ್ಮನ ಕಳಿಸುವ ಪದ್ಧತಿ ನಡೆಸಲಾಯಿತು.

ಪ್ರತಿವರ್ಷ ಪದ್ದತಿಯಂತೆ ಈ ವರ್ಷವು ಸಹ ಸಕಾಲಕ್ಕೆ ಮಳೆ ಬೆಳೆ ಸಮೃದ್ಧಿಯಾಗಿ ರೋಗ ರುಜಿನಿಗಳು ಬಾರದಂತೆ ಅಮ್ಮನವರನ್ನು ಸಕಲ ದೈವಸ್ತರು ಭಕ್ತಿಯಿಂದಪೂಜಿಸಿ ಸಡಗರ ಸಂಭ್ರಮದಿ0ದ ಅಜ್ಜಿ ಹಬ್ಬವನ್ನು ಸಂಭ್ರಮದಿAದ ಆಚರಿಸಲಾಯಿತು.

ರೈತಾಪಿ ವರ್ಗದ ಜನರ ಬಿತ್ತನೆ ಕಾರ್ಯಗಳು ಬರುವ ಈ ಹಬ್ಬದಲ್ಲಿ ಬಿತ್ತನೆ ಮಾಡಿದ ಬೆಳೆಗಳು ಸಮೃದ್ಧಿಯಾಗಿ ಬೆಳೆಯಲಿ, ಮನೆಗಳಲ್ಲಿನ ಧನ ಕರುಗಳು ಚೆನ್ನಾಗಿರಲಿ, ರೈತರ ಆರೋಗ್ಯ ವೃದ್ಧಿಯಾಗಿ ಗ್ರಾಮದಲ್ಲಿ ಶಾಂತಿ ನೆಮ್ಮದಿ ನೆಲೆಸಲೆಂದು ಹಬ್ಬ ಆಚರಿಸಿದರು ದೇವರಿಗೆ ಪ್ರಾರ್ಥಿಸಿದರು.

ಹೊಸ ಬಿದಿರಿನ ಮರದಲ್ಲಿ ಕುಡಿ ಬಾಳೆದೆಲೆ ಹಾಸಿ ಅದರ ಮೇಲೆ ಕುಂಬಾರನ ಮನೆಯಿಂದ ತಂದ ಮಣ್ಣಿನ ಕುಡಿಕೆಗೆ ವಿಳ್ಯೆದೆಲೆ, ಬೇವಿನ ಸೊಪ್ಪು, ಅರಿಶಿನ ಕುಂಕುಮ, ಬಳೆ ಬಿಚ್ಚಲೆ, ದೇವರ ಮನೆಯ ಜಗಲಿಟ್ಟು ಹೋಳಿಗೆ, ಮಾವಿನ ಹಣ್ಣಿನ ಶೀಕರಣೆ, ಅನ್ನ, ಮೊಸರಿನ ಎಡೆ ಮಾಡಿ, ಗ್ರಾಮದ ಹೊರವಲಯದ ಅಮ್ಮನ ಗದ್ದಿಗೆಯ ಬೇವಿನ ಮರದಡಿ ಇಟ್ಟು ಸಾಮೂಹಿಕವಾಗಿ ಪೂಜಿಸಿ ಎಡೆ ಅರ್ಪಿಸಿದರು. ನಂತರ ಮನೆಗೆ ತೆರಳಿ ಕುಟುಂಬದವರು ಬಂಧು ಬಳಗದೊಂದಿಗೆ ಹೋಳಿಗೆ ಭೋಜನ ಸವಿದರು

ಈ ಹಬ್ಬವನ್ನು ಹೋಳಿಗೆ ಹಬ್ಬ, ಅಜ್ಜಿ ಹಬ್ಬ, ಅಮ್ಮನ ಹಬ್ಬವೆಂದು ಗ್ರಾಮೀಣ ಭಾಗಗಲ್ಲಿ ಕರೆಯಲಾಗುತ್ತದೆ.

ಈ ಸಂಧರ್ಭದಲ್ಲಿ ಧರ್ಮಾಧಿಕಾರಿ ಪಿ.ಬಿ.ಗೌಡ್ರು ,
ಜಗದೀಶ, ಬಣಕಾರು ವಿರೇಶ್, ಹಂಪಾಪಟ್ಟಣದ ಕೊಟ್ರಶ್, ಕೌಟಿ ವಾಗೀಶ್,
ಬಿ.ಎಮ್.ಉಮಾಪತಿ ಸ್ವಾಮಿ, ಎಂ.ವೀರಭದ್ರಪ್ಪ, ಬಡಿಗೆರ್ ನಾಗರಾಜ್, ಮಟ್ಟೇರ ಮಲ್ಲಿಕಾರ್ಜುನ, ಆರ್.ಎಸ್.ಅಶೋಕಕುಮಾರ್, ಸಕಲ ಹರಪನಹಳ್ಳಿ ದೈವಸ್ತರು ಯುಕರು ಹಾಗೂ ಮಹಿಳೆಯರು ತಾಯೆಂದಿರು ಭಕ್ತಿಯಿಂದ ಸಮರ್ಪಿಸಿದರು.

Author
Publisher and Editor: Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜು.02 ರಂದು ಡಾ.ಫ.ಗು. ಹಳಕಟ್ಟಿಯವರ ಜನ್ಮದಿನ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮಮನಸೂರೆಗೊಂಡ ಸಂತಕವಿ ಕನಕದಾಸರ ‘ಮುತ್ತು ಬಂದಿದೆ ಕೇರಿಗೆ’ ಸಂಗೀತ-ನೃತ್ಯ ರೂಪಕ ಪ್ರದರ್ಶನಬಳ್ಳಾರಿ ಸರ್ಕಾರಿ ಪಾಲಿಟೆಕ್ನಿಕ್: ಪೋಸ್ಟ್ ಡಿಪ್ಲೋಮಾ ಇನ್ ಇಂಡಸ್ಟಿçಯಲ್ ಸೇಫ್ಟಿ ಕೋರ್ಸ್ ಪ್ರವೇಶಾತಿ ಅವಧಿ ವಿಸ್ತರಣೆನಮ್ಮ ಬದುಕಿನ ಭರವಸೆ....ವೈದ್ಯರುಇಟಗಿ ಆದರ್ಶ ವಿದ್ಯಾಲಯದ 6ನೇ ತರಗತಿ ಖಾಲಿ ಸೀಟುಗಳಿಗೆ ಕೌನ್ಸಲಿಂಗ್ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕಲಾವಿದರಿಂದ ಅರ್ಜಿ ಆಹ್ವಾನ ನದಿಗಳ ಜೋಡಣೆ ರಾಷ್ಟ್ರೀಯ ಯೋಜನೆಯಾಗಬೇಕು: ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡುಹೊರಗುತ್ತಿಗೆ ಹುದ್ದೆಗಳಿಗೆ ಅರ್ಜಿ ಆಹ್ವಾನಬಳ್ಳಾರಿ ರೈಲ್ವೆ ನಿಲ್ದಾಣ : ಜುಲೈ 30ರೊಳಗಾಗಿ ಹೊಸ ಲಿಫ್ಟ್, ಸೆನ್ಸಾರ್ ಎಸ್ಕಲೇಟರ್ ಪ್ರಾರಂಭ ಸಾಧ್ಯತೆಜೂನ್ 25ರಂದು ತುಂಗಭದ್ರ ಜಲಾಶಯ ಆವರಣದಲ್ಲಿ ಐತಿಹಾಸಿಕ ಕಾರ್ಯಕ್ರಮ: ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಮಾಗಮ