Advertisement
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಶ್ರೀ ಗವಿಸಿದ್ದೇಶ್ವರ ಜಾತ್ರೆಯಲ್ಲಿ ಗಮನ ಸೆಳದ ಬೃಹತ್ ಗಾತ್ರದ ಗಾಳಿಪಟಗಳ ಪ್ರದರ್ಶನ... ಗವಿಮಠದ ಬಾನಂಗಳದಲ್ಲಿ ಬಣ್ಣ-ಬಣ್ಣದ ಪಥಂಗಗಳ ಹಾರಾಟ

ಕೊಪ್ಪಳ ಜನವರಿ 17 ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಗವಿಮಠದ ಬಾನಂಗಳದಲ್ಲಿ ಬಣ್ಣ-ಬಣ್ಣದ ಪಥಂಗಗಳು ಹಾರಾಡಿ ಸಾರ್ವಜನಿಕರ ಗಮನ ಸೆಳೆದವು.

2025ರ ಗವಿಶ್ರೀ ಕ್ರೀಡಾ ಉತ್ಸವದ ಭಾಗವಾಗಿ ಶುಕ್ರವಾರ ಶ್ರೀ ಗವಿಮಠ ಆವರಣದಲ್ಲಿ ಜರುಗಿದ ಬೃಹತ್ ಗಾತ್ರದ ಗಾಳಿಪಟಗಳ ಪ್ರದರ್ಶನದಲ್ಲಿ ಓಡಿಸ್ಸಾ, ಗುಜರಾಜ, ಕೇರಳ ಸೇರಿದಂತೆ ದೇಶದ ವಿವಿಧ ರಾಜ್ಯಗಳ ಮತ್ತು ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಯ ತಂಡಗಳು ಭಾಗವಹಿಸಿ, ಹುಲಿ, ಚಿರತೆ, ಕುದರೆ, ಮೀನು ಹಾಗೂ ಇತರೆ ಮಾದರಿಯ ವಿಭಿನ್ನ ಗಾಳಿಪಟಗಳನ್ನು ಹಾರಿಸಿ ಜನರ ಆಕಷಣೆಯನ್ನು ಸೆಳೆದವು. ಮಕ್ಕಳು ಹಾಗೂ ಸಾರ್ವಜನಿಕರು ರಂಗು ರಂಗಿನ ಗಾಳಿಪಟಗಳ ಹಾರಾಟವನ್ನು ನೋಡಿ ಚಪ್ಪಾಳೆ ತಟ್ಟಿ ಖುಷಿಪಟ್ಟರು.


ಗಾಳಿಪಟಗಳ ಪ್ರದರ್ಶನ ಸ್ಥಳಕ್ಕೆ ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀನಿವಾಸ ಗುಪ್ತಾ ಅವರು ಭೇಟಿ ನೀಡಿ, ಬಳಿಕ ಮಾತನಾಡಿ, ಗಾಳಿಪಟ ಉತ್ಸವವನ್ನು ಕೊಪ್ಪಳಕ್ಕೆ ಪರಿಚಯಿಸುವ ಉದ್ದೇಶದಿಂದ ಬೃಹತ್ ಗಾತ್ರದ ಗಾಳಿಪಟಗಳ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ. ಗಾಳಿಪಟ ಪ್ರದರ್ಶನಗಳು ಹೆಚ್ಚಾಗಿ ಸಮುದ್ರ ತೀರದ ಪ್ರದೇಶಗಳಲ್ಲಿ ನಡೆಯುತ್ತದೆ. ಅಂತಹ ಉತ್ಸವಗಳಿಗೆ ಹೋಗಲಾಗದ ನಮ್ಮ ಗ್ರಾಮೀಣ ಭಾಗದ ಜನರಿಗೆ ಶ್ರೀ ಗವಿಸಿದ್ದೇಶ್ವರ ಜಾತ್ರೆಯಲ್ಲಿ ಗಾಳಿಪಟಗಳ ಪ್ರದರ್ಶನವನ್ನು ವೀಕ್ಷಿಸುವ ಅವಕಾಶ ಕಲ್ಪಿಸಲಾಗಿದೆ. ಈ ಪ್ರದರ್ಶನದಲ್ಲಿ ಗುಜರಾತ, ಓಡಿಸ್ಸಾ, ಕೇರಳ ಮತ್ತು ನಮ್ಮ ಕರ್ನಾಕಟ ರಾಜ್ಯದ ತಂಡಗಳು ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಪಡೆದವರು ಸಹ ಪಾಲ್ಗೊಂಡಿದ್ದಾರೆ. ರಾತ್ರಿಯೂ ಸಹ ಎಲ್.ಇ.ಡಿ ಗಾಳಿಪಟಗಳ ಪ್ರದರ್ಶನವು ನಡೆಯಲಿದ್ದು, ಸಾರ್ವಜನಿಕರು ಇದನ್ನು ವೀಕ್ಷಿಸಿ ಆನಂದಿಸಬಹುದಾಗಿದೆ ಎಂದು ಹೇಳಿದರು.


ಭಾರತದ ಕೈಟ್ ಮ್ಯಾನ್ ಎಂದೇ ಪ್ರಸಿದ್ದರಾದ ವಿ.ಕೃಷ್ಣಜಿ ರಾವ್ ಅವರು ಮಾತನಾಡಿ, ಗಾಳಿಪಟಗಳನ್ನು ಮೊದಲು ಬಿದಿರಿನ ಮೂಲಕ ತಯಾರಿಸಿ ಹಾರಿಸುತ್ತಿದ್ದೇವು. ಈಗ ವಿಭಿನ್ನ ರೂಪದ ಬಟ್ಟೆಗಳಲ್ಲಿ ಸಿದ್ದಪಡಿಸಿ ಹಾರಿಸಲಾಗುತ್ತಿದೆ. ಫೈಲೆಟ್ ಕೈಟ್, ಹುಲಿ, ಕುದರೆ, ಮೀನು, ಹಸು, ಆಮೆ ಹೀಗೆ ಹಲವಾರು ಬಗೆಯ ಗಾಳಿಪಟಗಳನ್ನು ಮಾಡಿ ಹಾರಿಸಲಾಗುತ್ತಿದೆ. ಜಾತ್ರೆಯಲ್ಲಿ ಗಾಳಿಪಟ ಉತ್ಸವ ಹಮ್ಮಿಕೊಳ್ಳುವುದರಿಂದ ಹೆಚ್ಚಿನ ಜನರಿಗೆ ಮನರಂಜನೆ ಸಿಗುತ್ತದೆ. ಗವಿಸಿದ್ದೇಶ್ವರ ಜಾತ್ರೆಯಲ್ಲಿ ಗಾಳಿಪಟಗಳ ಪ್ರದರ್ಶನ ಹಮ್ಮಿಕೊಂಡಿರುವುದರಿoದ ಜನರು ತುಂಬಾ ಉತ್ಸಾಹದಿಂದ ಇವುಗಳ ವೀಕ್ಷಣೆ ಮಾಡುತ್ತಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವಿಠ್ಠಲ್ ಜಾಬಗೌಡರ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎ.ಬಸವರಾಜ ಸೇರಿದಂತೆ ವಿವಿಧ ರಾಜ್ಯ ಮತ್ತು ಜಿಲ್ಲೆಗಳಿಂದ ಆಗಮಿಸಿದ ಗಾಳಿಪಟಗಳನ್ನು ಹಾರಿಸುವ ತಂಡಗಳ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು, ದೈಹಿಕ ಶಿಕ್ಷಕರು, ವಿವಿಧ ಶಾಲಾ ಕಾಲೇಜುನ ಮಕ್ಕಳು ಸೇರಿದಂತೆ ಹಲವಾರು ಜನರು ಉಪಸ್ಥಿತರಿದ್ದರು.

Author
Publisher and Editor: Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜು.02 ರಂದು ಡಾ.ಫ.ಗು. ಹಳಕಟ್ಟಿಯವರ ಜನ್ಮದಿನ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮಮನಸೂರೆಗೊಂಡ ಸಂತಕವಿ ಕನಕದಾಸರ ‘ಮುತ್ತು ಬಂದಿದೆ ಕೇರಿಗೆ’ ಸಂಗೀತ-ನೃತ್ಯ ರೂಪಕ ಪ್ರದರ್ಶನಬಳ್ಳಾರಿ ಸರ್ಕಾರಿ ಪಾಲಿಟೆಕ್ನಿಕ್: ಪೋಸ್ಟ್ ಡಿಪ್ಲೋಮಾ ಇನ್ ಇಂಡಸ್ಟಿçಯಲ್ ಸೇಫ್ಟಿ ಕೋರ್ಸ್ ಪ್ರವೇಶಾತಿ ಅವಧಿ ವಿಸ್ತರಣೆನಮ್ಮ ಬದುಕಿನ ಭರವಸೆ....ವೈದ್ಯರುಇಟಗಿ ಆದರ್ಶ ವಿದ್ಯಾಲಯದ 6ನೇ ತರಗತಿ ಖಾಲಿ ಸೀಟುಗಳಿಗೆ ಕೌನ್ಸಲಿಂಗ್ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕಲಾವಿದರಿಂದ ಅರ್ಜಿ ಆಹ್ವಾನ ನದಿಗಳ ಜೋಡಣೆ ರಾಷ್ಟ್ರೀಯ ಯೋಜನೆಯಾಗಬೇಕು: ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡುಹೊರಗುತ್ತಿಗೆ ಹುದ್ದೆಗಳಿಗೆ ಅರ್ಜಿ ಆಹ್ವಾನಬಳ್ಳಾರಿ ರೈಲ್ವೆ ನಿಲ್ದಾಣ : ಜುಲೈ 30ರೊಳಗಾಗಿ ಹೊಸ ಲಿಫ್ಟ್, ಸೆನ್ಸಾರ್ ಎಸ್ಕಲೇಟರ್ ಪ್ರಾರಂಭ ಸಾಧ್ಯತೆಜೂನ್ 25ರಂದು ತುಂಗಭದ್ರ ಜಲಾಶಯ ಆವರಣದಲ್ಲಿ ಐತಿಹಾಸಿಕ ಕಾರ್ಯಕ್ರಮ: ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಮಾಗಮ