Advertisement
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸರ್ವಜನಾಂಗದ ಶಾಂತಿಯ ತೋಟ

ಭಾರತ ಸರ್ವಜನಾಂಗದ ಶಾಂತಿಯ ತೋಟ
ಸರ್ವಧರ್ಮಗಳ ಸಮನ್ವಯದ ಸ್ನೇಹದ ಕೂಟ;
ಜಾತಿ ಧರ್ಮಗಳು ಹಲವಿದ್ದರೂ ಭಾವೈಕ್ಯತೆಯೊಂದೆ
ಭಾಷೆಗಳು ಬೇರೆಯಾದರು ನುಡಿವ ನಾಲಿಗೆಯೊಂದೆ..!!

ಹಿಂದೂ ಮುಸ್ಲಿಂ ಕ್ರೈಸ್ತ ಬೌದ್ದರೆಲ್ಲರೂ ಒಂದೇ
ರಾಮಾಯಣ ಮಹಾಭಾರತ ಕುರಾನ್ ಮಂತ್ರವೊಂದೆ;
ಹುತ್ತಿ ಬಿತ್ತುವ ಬೆಳೆಗೆ ಮಳೆಯ ಹನಿಯೊಂದೆ
ಹಗಲು ರಾತ್ರಿ ಬೆಳಕು ನೀಡೋ ಸೂರ್ಯಚಂದ್ರರೊಂದೆ...!!

ಉಸಿರಾಡುವ ಗಾಳಿ ತಿನ್ನುವ ಅನ್ನವೊಂದೆ
ಮಡಿಮೈಲಿಗೆಯಾದರೆ ಸ್ವಚ್ಛಗೊಳಿಸೋ ಗಂಗೆಯೊಂದೆ;
ಸ್ನೇಹ ಪ್ರೀತಿಯ ಬೆಸೆಯುವ ಮನದ ಭಾವವೊಂದೆ
ಕಷ್ಟಕಾಲದಿ ಸಹಾಯಹಸ್ತ ಚಾಚುವ ಭಾರತ ನಾಡೊಂದೆ...!!

ಸರ್ವ ಜನರಿಗೂ ನ್ಯಾಯ ನೀಡುವ ಸಂವಿಧಾನವೊಂದೆ
ಭಾರತಾಂಬೆಗೆ ಕೀರಿಟಪ್ರಾಯ ತ್ರಿವರ್ಣ ಧ್ವಜವೊಂದೆ;
ಸರ್ವಧರ್ಮಗಳು ಬೋಧಿಸುವ ನೀತಿಯ ಪಾಠವೊಂದೆ
ಎಲ್ಲರ ಸಂಪ್ರದಾಯಗಳಿಗೂ ಬೆಲೆನೀಡುವ ಪೂಣ್ಯಭೂಮಿಯೊಂದೆ....!!!

ಹಬ್ಬಗಳು ಬೇರೆಯಾದರು ಶುಭಕೋರುವ ಮನಗಳೊಂದೆ
ಅತಿಥಿ ಸತ್ಕಾರದ ಸಂಸ್ಕೃತಿ ಜಗತ್ತಿಗೆಲ್ಲ ಮಾದರಿಯೊಂದೆ;
ಸಾವುನೋವಿಗೆ ಮನಮೀಡಿವ ಹೃದಯಗಳ ನೋವೊಂದೆ
ಸತ್ಯಧರ್ಮವ ಪರಿಪಾಲಿಸುವ ಮೌಲ್ಯದ ಜನರೊಂದೆ....!!

ದೃಷ್ಟತನವ ಖಂಡಿಸುವ ದಿಟ್ಟತನದ ಮನಗಳೊಂದೆ
ತಾಯ್ನೆಲದ ವಿರೋಧಿಗಳ ಹುಟ್ಟಡಗಿಸುವ ಯೋಧರೊಂದೆ;
ಸಹಬಾಳ್ವೆಯ ಸಮನ್ವಯದ ಕ್ರಾಂತಿಮಾಡಿದ ಬಸವಣ್ಣನ ನಾಡೊಂದೆ;
ಸರ್ವರಿಗೂ ಸಮಾನತೆ ಸ್ವಾತಂತ್ರ್ಯ ನೀಡಿದ
ಭಾರತ ನೆಲವೊಂದೆ..!!!!

✍️ಕಾಡಜ್ಜಿ ಮಂಜುನಾಥ,

ಹರಪನಹಳ್ಳಿ ವಿಜಯನಗರ ಜಿಲ್ಲೆ

Author
Publisher and Editor: Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮುನಿರಾಬಾದ್: ಆ. 17ರಂದು ವಿದ್ಯುತ್ ಗ್ರಾಹಕರ ಸಂವಾದ ಸಭೆ ----ವಿಶೇಷ ಚೇತನ ಮಕ್ಕಳ ಚಿಕಿತ್ಸೆಗೆ ಫಿಜಿಯೋಥೆರಪಿಸ್ಟ್, ಮಹಿಳಾ ಸಹಾಯಕಿಯರ ತಾತ್ಕಾಲಿಕ ನೇಮಕ: ಅರ್ಜಿ ಆಹ್ವಾನ ----ಕೊಪ್ಪಳ: ಜಪ್ತಿ ಮಾಡಲಾದ 349.10 ಕ್ವಿಂಟಾಲ್ ಅಕ್ಕಿ ಬಹಿರಂಗ ಹರಾಜು ಆಗಸ್ಟ್ 25ಕ್ಕೆ ----ಕುಟುಂಬದಲ್ಲಿ ಮಹಿಳೆಯರ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಿ: ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ. ಹನುಮಂತಪ್ಪ ಕರೆತೋಟಗಾರಿಕೆ ಇಲಾಖೆಯಿಂದ ವಿವಿಧ ಹಣ್ಣಿನ ಸಸಿ, ಕಸಿ ಗಿಡಗಳ ಮಾರಾಟಆಗಸ್ಟ್ 20 ರಂದು ಡಿ. ದೇವರಾಜ ಅರಸು ಜಯಂತಿ ಅರ್ಥಪೂರ್ಣ ಆಚರಣೆಗೆ ಜಿಲ್ಲಾಡಳಿತದಿಂದ ಸಿದ್ಧತೆ: ಅಪರ ಜಿಲ್ಲಾಧಿಕಾರಿ ಇ. ಬಾಲಕೃಷ್ಣಹಿಂದುಳಿದ ವರ್ಗಗಳ ಸಮಾಜದ ಮಹನೀಯರ ಜಯಂತಿಗಳಿಗೆ ರೂ.50 ಸಾವಿರ ಅನುದಾನ: ಮೇಯರ್ ಪಿ.ಗಾದೆಪ್ಪಕೊಪ್ಪಳದಲ್ಲಿ ಮೂರು ದಿನಗಳ ಸಾಮರ್ಥ್ಯಾಭಿವೃದ್ಧಿ ಕಾರ್ಯಕ್ರಮಕ್ಕೆ ಚಾಲನೆ -- ಮಕ್ಕಳ ರಕ್ಷಣೆಯಲ್ಲಿ ಬೆಂಬಲ ವ್ಯಕ್ತಿಗಳ ಪಾತ್ರ ಮಹತ್ವದ್ದು: ನ್ಯಾ. ಮಧು ಎನ್.ಆರ್. ----ಭಾರತ್ ಜೋಡೋ ಯುವ ಸಂಘಗಳ ನೋಂದಣಿಗೆ ಅರ್ಜಿ ಆಹ್ವಾನಬಳ್ಳಾರಿ ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ: ಶೇ. 81.83 ರಷ್ಟು ಡಿಜಿಟಲೀಕರಣ ಪೂರ್ಣ