Advertisement
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸರ್ವಜನಾಂಗದ ಶಾಂತಿಯ ತೋಟ

ಭಾರತ ಸರ್ವಜನಾಂಗದ ಶಾಂತಿಯ ತೋಟ
ಸರ್ವಧರ್ಮಗಳ ಸಮನ್ವಯದ ಸ್ನೇಹದ ಕೂಟ;
ಜಾತಿ ಧರ್ಮಗಳು ಹಲವಿದ್ದರೂ ಭಾವೈಕ್ಯತೆಯೊಂದೆ
ಭಾಷೆಗಳು ಬೇರೆಯಾದರು ನುಡಿವ ನಾಲಿಗೆಯೊಂದೆ..!!

ಹಿಂದೂ ಮುಸ್ಲಿಂ ಕ್ರೈಸ್ತ ಬೌದ್ದರೆಲ್ಲರೂ ಒಂದೇ
ರಾಮಾಯಣ ಮಹಾಭಾರತ ಕುರಾನ್ ಮಂತ್ರವೊಂದೆ;
ಹುತ್ತಿ ಬಿತ್ತುವ ಬೆಳೆಗೆ ಮಳೆಯ ಹನಿಯೊಂದೆ
ಹಗಲು ರಾತ್ರಿ ಬೆಳಕು ನೀಡೋ ಸೂರ್ಯಚಂದ್ರರೊಂದೆ...!!

ಉಸಿರಾಡುವ ಗಾಳಿ ತಿನ್ನುವ ಅನ್ನವೊಂದೆ
ಮಡಿಮೈಲಿಗೆಯಾದರೆ ಸ್ವಚ್ಛಗೊಳಿಸೋ ಗಂಗೆಯೊಂದೆ;
ಸ್ನೇಹ ಪ್ರೀತಿಯ ಬೆಸೆಯುವ ಮನದ ಭಾವವೊಂದೆ
ಕಷ್ಟಕಾಲದಿ ಸಹಾಯಹಸ್ತ ಚಾಚುವ ಭಾರತ ನಾಡೊಂದೆ...!!

ಸರ್ವ ಜನರಿಗೂ ನ್ಯಾಯ ನೀಡುವ ಸಂವಿಧಾನವೊಂದೆ
ಭಾರತಾಂಬೆಗೆ ಕೀರಿಟಪ್ರಾಯ ತ್ರಿವರ್ಣ ಧ್ವಜವೊಂದೆ;
ಸರ್ವಧರ್ಮಗಳು ಬೋಧಿಸುವ ನೀತಿಯ ಪಾಠವೊಂದೆ
ಎಲ್ಲರ ಸಂಪ್ರದಾಯಗಳಿಗೂ ಬೆಲೆನೀಡುವ ಪೂಣ್ಯಭೂಮಿಯೊಂದೆ....!!!

ಹಬ್ಬಗಳು ಬೇರೆಯಾದರು ಶುಭಕೋರುವ ಮನಗಳೊಂದೆ
ಅತಿಥಿ ಸತ್ಕಾರದ ಸಂಸ್ಕೃತಿ ಜಗತ್ತಿಗೆಲ್ಲ ಮಾದರಿಯೊಂದೆ;
ಸಾವುನೋವಿಗೆ ಮನಮೀಡಿವ ಹೃದಯಗಳ ನೋವೊಂದೆ
ಸತ್ಯಧರ್ಮವ ಪರಿಪಾಲಿಸುವ ಮೌಲ್ಯದ ಜನರೊಂದೆ....!!

ದೃಷ್ಟತನವ ಖಂಡಿಸುವ ದಿಟ್ಟತನದ ಮನಗಳೊಂದೆ
ತಾಯ್ನೆಲದ ವಿರೋಧಿಗಳ ಹುಟ್ಟಡಗಿಸುವ ಯೋಧರೊಂದೆ;
ಸಹಬಾಳ್ವೆಯ ಸಮನ್ವಯದ ಕ್ರಾಂತಿಮಾಡಿದ ಬಸವಣ್ಣನ ನಾಡೊಂದೆ;
ಸರ್ವರಿಗೂ ಸಮಾನತೆ ಸ್ವಾತಂತ್ರ್ಯ ನೀಡಿದ
ಭಾರತ ನೆಲವೊಂದೆ..!!!!

✍️ಕಾಡಜ್ಜಿ ಮಂಜುನಾಥ,

ಹರಪನಹಳ್ಳಿ ವಿಜಯನಗರ ಜಿಲ್ಲೆ

Author
Publisher and Editor: Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜು.02 ರಂದು ಡಾ.ಫ.ಗು. ಹಳಕಟ್ಟಿಯವರ ಜನ್ಮದಿನ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮಮನಸೂರೆಗೊಂಡ ಸಂತಕವಿ ಕನಕದಾಸರ ‘ಮುತ್ತು ಬಂದಿದೆ ಕೇರಿಗೆ’ ಸಂಗೀತ-ನೃತ್ಯ ರೂಪಕ ಪ್ರದರ್ಶನಬಳ್ಳಾರಿ ಸರ್ಕಾರಿ ಪಾಲಿಟೆಕ್ನಿಕ್: ಪೋಸ್ಟ್ ಡಿಪ್ಲೋಮಾ ಇನ್ ಇಂಡಸ್ಟಿçಯಲ್ ಸೇಫ್ಟಿ ಕೋರ್ಸ್ ಪ್ರವೇಶಾತಿ ಅವಧಿ ವಿಸ್ತರಣೆನಮ್ಮ ಬದುಕಿನ ಭರವಸೆ....ವೈದ್ಯರುಇಟಗಿ ಆದರ್ಶ ವಿದ್ಯಾಲಯದ 6ನೇ ತರಗತಿ ಖಾಲಿ ಸೀಟುಗಳಿಗೆ ಕೌನ್ಸಲಿಂಗ್ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕಲಾವಿದರಿಂದ ಅರ್ಜಿ ಆಹ್ವಾನ ನದಿಗಳ ಜೋಡಣೆ ರಾಷ್ಟ್ರೀಯ ಯೋಜನೆಯಾಗಬೇಕು: ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡುಹೊರಗುತ್ತಿಗೆ ಹುದ್ದೆಗಳಿಗೆ ಅರ್ಜಿ ಆಹ್ವಾನಬಳ್ಳಾರಿ ರೈಲ್ವೆ ನಿಲ್ದಾಣ : ಜುಲೈ 30ರೊಳಗಾಗಿ ಹೊಸ ಲಿಫ್ಟ್, ಸೆನ್ಸಾರ್ ಎಸ್ಕಲೇಟರ್ ಪ್ರಾರಂಭ ಸಾಧ್ಯತೆಜೂನ್ 25ರಂದು ತುಂಗಭದ್ರ ಜಲಾಶಯ ಆವರಣದಲ್ಲಿ ಐತಿಹಾಸಿಕ ಕಾರ್ಯಕ್ರಮ: ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಮಾಗಮ