ವಿಜಯನಗರ(ಹೊಸಪೇಟೆ)ಆಗಸ್ಟ್.04:
ಹೊಸಪೇಟೆ ತಾಲೂಕಿನ ಸಮಗ್ರ ಗಣಿ ಪರಿಸರ ಪುನಶ್ಚೇತನ ಯೋಜನೆಯಡಿ ತೋಟಗಾರಿಕೆ ಇಲಾಖೆ ವತಿಯಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಈ ಯೋಜನೆಯಡಿ ಪ್ರತ್ಯೇಕ ಹಣ್ಣು ಸಂಸ್ಕರಣಾ ಘಟಕ, ಬಹು ಹಣ್ಣು ಸಂಸ್ಕರಣಾ ಘಟಕ, ಹಣ್ಣು ಅಥವಾ ತರಕಾರಿ ನಿರ್ಜಲೀಕರಣ ಘಟಕ, ಮಾವಿನ ತಿರುಳು ಸಂಸ್ಕರಣಾ ಘಟಕ ಹಾಗೂ ತೆಂಗಿನಕಾಯಿ ಸಂಬAಧಿತ ಕೊಯ್ಲು ನಂತರದ ಮತ್ತು ಸಂಸ್ಕರಣಾ ಸರಪಳಿ ನಿರ್ಮಾಣ ಘಟಕಕ್ಕೆ ಆಸಕ್ತ ರೈತ, ರೈತ ಉತ್ಪಾದಕ ಸಂಸ್ಥೆ ಹಾಗೂ ತೋಟಗಾರಿಕೆ ಚಟುವಟಿಯಲ್ಲಿ ಆಸಕ್ತಿ ಹೊಂದಿರುವ ಎನ್.ಜಿ.ಒ ಸಂಸ್ಥೆಗಳು ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿ ಮೊ.ಸಂ: 9164297220, ಮರಿಯಮ್ಮನಹಳ್ಳಿ: 7204888978, ಕಮಲಾಪುರ: 8123465548, ಹೊಸಪೇಟೆ ಸಹಾಯಕ ತೋಟಗಾರಿಕೆ ನಿರ್ದೇಶಕ ಮೊ.ಸಂ: 9901555690 ಹಾಗೂ ಜಿ.ಪಂ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಮೊ.ಸಂ: 83100291867 ಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ಪಂಚಾಯತ್ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಕೆ.ಎಂ.ರಮೇಶ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
