Advertisement
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ತತ್ವಪದ–ಜನಪದ ಗೀತೆಗಳು ಯುವಜನತೆಗೆ ಸ್ಫೂರ್ತಿ: ಮಲ್ಕಪುರ ಮಹಾದೇವಯ್ಯಸ್ವಾಮಿ ಗವಾಯಿಗಳು

 

ಕೆ.ಸೂಗೂರು, ಆ. 05 ತತ್ವಪದಗಳು ಹಾಗೂ ಜನಪದ ಗೀತೆಗಳು ನಮ್ಮ ಸಂಸ್ಕೃತಿ, ಜೀವನ ಮೌಲ್ಯಗಳು ಮತ್ತು ನೈತಿಕತೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಅಮೂಲ್ಯ ಪರಂಪರೆಯಾಗಿದ್ದು, ಇವುಗಳನ್ನು ಆಲಿಸುವುದರಿಂದ ಯುವಜನತೆಗೆ ಉತ್ತಮ ಪ್ರೇರಣೆ ದೊರೆಯುತ್ತದೆ ಎಂದು ಹಿರಿಯ ಜನಪದ ಕಲಾವಿದ ಮಲ್ಕಪುರ ಮಹಾದೇವಯ್ಯಸ್ವಾಮಿ ಗವಾಯಿಗಳು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಕೆ.ಸೂಗೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ರಾತ್ರಿ ಆಯೋಜಿಸಿದ್ದ ಪ್ರಯೋಜಿತ ಜನಪದ ಸಂಗೀತ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜನಪದ ಕಲೆಗಳು ಗ್ರಾಮೀಣ ಬದುಕಿನ ಸಂಸ್ಕೃತಿ, ಸಂಪ್ರದಾಯ ಮತ್ತು ಜೀವನ ಮೌಲ್ಯಗಳನ್ನು ಪ್ರತಿಬಿಂಬಿಸುತ್ತವೆ. ಇಂತಹ ಕಾರ್ಯಕ್ರಮಗಳ ಮೂಲಕ ಜನಪದ ಕಲೆಯನ್ನು ಉಳಿಸಿ ಬೆಳೆಸುವ ಜೊತೆಗೆ ಯುವಜನರಲ್ಲಿ ಕಲೆಯ ಬಗ್ಗೆ ಆಸಕ್ತಿ ಮೂಡಿಸುವ ಕೆಲಸವಾಗುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.
ಬಳಿಕ ಮಲ್ಕಪುರ ಮಹಾದೇವಯ್ಯಸ್ವಾಮಿ ಗವಾಯಿಗಳು ಪ್ರಸ್ತುತಪಡಿಸಿದ ತತ್ವಪದಗಳು ಹಾಗೂ ಜನಪದ ಗೀತೆಗಳು ನೆರೆದಿದ್ದ ಶ್ರೋತರನ್ನು ಮಂತ್ರಮುಗ್ಧರನ್ನಾಗಿಸಿದವು. ಅವರ ಗಾಯನಕ್ಕೆ ಪ್ರೇಕ್ಷಕರು ಚಪ್ಪಾಳೆ ತಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರು.
ಕಲಾವಿದ ಬಿ. ಚಿದಾನಂದಪ್ಪ ಅವರು ಕೂಡ ತತ್ವಪದಗಳು ಮತ್ತು ಜನಪದ ಗೀತೆಗಳನ್ನು ಹಾಡಿ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ತಂದರು. ಹಾರ್ಮೋನಿಯಂನಲ್ಲಿ ಮಲ್ಕಪುರ ಮಹಾದೇವಯ್ಯಸ್ವಾಮಿ ಗವಾಯಿಗಳು ಹಾಗೂ ತಬಲದಲ್ಲಿ ವಿರುಪಾಕ್ಷಪ್ಪ ದ್ಯಾವಲಾಪುರ ಉತ್ತಮ ಸಾಥ್ ನೀಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಆನಂದಪ್ಪ ತಾತ ಹೆರಕಲ್ಲು, ವಿ.ಎಸ್.ಎಸ್.ಎನ್. ಉಪಾಧ್ಯಕ್ಷ ಜಿ. ಗಂಗಾಧರ, ನಿರ್ದೇಶಕ ಕೆ. ಬ್ರಹ್ಮ, ಎಸ್.ಸಿ.ಡಿ.ಎಂ.ಸಿ. ಅಧ್ಯಕ್ಷ ನಾಗರಾಜ, ಮಾಜಿ ಅಧ್ಯಕ್ಷ ಹೆಚ್.ಕೆ. ಬಸವರಾಜ, ಮುಖ್ಯಗುರು ಅರುಣ, ಶಿಕ್ಷಕರಾದ ಬಿ. ಶರಣಪ್ಪ, ವೀರೇಶ್ ಹಾಗೂ ಗ್ರಾಮಸ್ಥರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.

Author
Publisher and Editor: Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಸತಿ ಶಾಲೆಗಳ 6ನೇ ತರಗತಿ ಖಾಲಿ ಸ್ಥಾನಗಳಿಗೆ ಅರ್ಜಿ ಆಹ್ವಾನಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನಹಾವು ಮತ್ತು ನಾಯಿ ಕಡಿತ ಪ್ರಕರಣಗಳ ತಡೆಗೆ ಜಾಗೃತಿ: ಬಳ್ಳಾರಿಯಲ್ಲಿ ಪರಿಶೋಧನ ಸಭೆ ಹಾವು ಕಡಿತಕ್ಕೆ 45 ನಿಮಿಷದೊಳಗೆ ಸೂಕ್ತ ಚಿಕಿತ್ಸೆ ಅಗತ್ಯ: ಡಿಹೆಚ್‌ಓ ಡಾ.ಅಲಕಾನಂದ ಡಿ. ಮಳಗಿತತ್ವಪದ–ಜನಪದ ಗೀತೆಗಳು ಯುವಜನತೆಗೆ ಸ್ಫೂರ್ತಿ: ಮಲ್ಕಪುರ ಮಹಾದೇವಯ್ಯಸ್ವಾಮಿ ಗವಾಯಿಗಳುಮಣ್ಣೂರು, ಎಂ.ಸೂಗೂರು ಗ್ರಾಮಗಳಲ್ಲಿ ನದಿ ಮರಳು ಗಣಿಗಾರಿಕೆ: ಸೆಪ್ಟೆಂಬರ್ 2 ರಂದು ಪರಿಸರ ಸಾರ್ವಜನಿಕ ಆಲಿಕೆ ಸಭೆಸಂಚಾರ ಸುಗಮ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಲು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅಧಿಕಾರಿಗಳಿಗೆ ತಾಕೀತುಕರ್ನಾಟಕ ಸಚಿವ ಸಂಪುಟ ವಿಸ್ತರಣೆ: 20 ನೂತನ ಸಚಿವರ ಪಟ್ಟಿ ಪ್ರಕಟಮಾನವ ಕಳ್ಳ ಸಾಗಣಿಕೆ ತಡೆಗೆ ಜಾಗೃತಿ ಅಗತ್ಯ: ಡಾ. ಸಂಜಯ್ ದೊಡ್ಡಮನಿ. *ಹಣದ ಬೇಡಿಕೆ ಭ್ರಷ್ಟತನ; ಪ್ರಾಥಮಿಕ ವರದಿಯಿಂದ ದೃಢ -- ಕನಕಗಿರಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಅಮಾನತಿಗೆ ಶಿಫಾರಸ್ಸು