Advertisement
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಆರೋಗ್ಯಕರ ಆಯುಷ್ ಪಾನಕ ಪರಿಚಯ: ಚಿಂಚಾ ಪಾನಕ ವಿತರಣೆ

ರಾಯಚೂರು,ಮೇ.22 ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆಯುಷ್ ಇಲಾಖೆಯ ವತಿಯಿಂದ ಮೇ.22 ನಗರದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಆರೋಗ್ಯಕರ ಆಯುಷ್ ಪಾನಕ ಪರಿಚಯದಲ್ಲಿ “ಚಿಂಚಾ ಪಾನಕ” ಸಾರ್ವಜನಿಕರಿಗು ಮತ್ತು ಸಿಬ್ಬಂದಿಗಳಿಗೆ ವಿತರಿಸುವ ಮೂಲಕ ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಸಹಾಯಕ ಆಯುಕ್ತ ಸುಭಾಷ ಸಂಪಗಾವಿ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಶಂಕರಗೌಡ ಎಸ್.ಪಾಟೀಲ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.



ಇದೇ ವೇಳೆ ಚಿಂಚಾ ಪಾನಕ ತಯಾರಿಸುವ ವಿಧಾನದ ಬಗ್ಗೆ ಪಂಚ ಕರ್ಮ ಘಟಕದ ವೈದ್ಯರಾದ ಡಾ.ನವೀನ ಎನ್.ಡಿ, ಅವರು ಮಾತನಾಡಿ, ಹುಣಸಿ ಹಣ್ಣು 100 ಗ್ರಾಂ, ಬೆಲ್ಲದ ಪುಡಿ 4೦೦ ಮಿಲಿ, ಜೀರಿಗೆ ಪುಡಿ 1ಗ್ರಾಂ, ಕಾಳು ಮೆಣಸಿನ ಪುಡಿ 5 ಗ್ರಾಂ, ಸೈಂದವ ಲವಣ 5 ಗ್ರಾಂ ತೆಗೆದುಕೊಂಡು ಹುಣಸಿ ಹಣ್ಣು ಅಗತ್ಯ ಪ್ರಮಾಣ ನೀರಿನಲ್ಲಿ ಇಡೀ ರಾತ್ರಿ ನೆನಸಿಡಬೇಕು, ಮರುದಿನ ಬೆಳಿಗ್ಗೆ ಅದನ್ನು ಶುದ್ಧವಾದ ಕೈಗಳಿಂದ ಚೆನ್ನಾಗಿ ಹಿಸಕಿ ಸೋಸಿಕೋಬೇಕು ಅದನ್ನು ಒಂದು ಬಾಟಲಿನಲ್ಲಿ ತುಂಬಿಸಕೊಳ್ಳಬೇಕು, 2 ರಿಂದ ೦3 ಲಿಟರ್ ನೀರಿಗೆ ಮೇಲೆ ತಿಳಿಸಿದ ಎಲ್ಲಾ ಮಿಶ್ರಣಗಳನ್ನು ಸೇರಿಸಿ ಕಲಿಸಬೇಕು. ಪ್ರತಿ ವ್ಯಕ್ತಿ 5ರಿಂದ 1೦೦ ಮಿ.ಲಿ ಪಾನಕವನ್ನು ಸೇವಿಸಬೇಕು ಎಂದು ಮಾಹಿತಿ ನೀಡಿದರು.



ನಂತರ ಡಾ.ಬಸವರಾಜ್ ಕಟ್ಟಿ ಅವರು ಚಿಂಚಾ ಪಾನಕವು ಮಾನವನ ಜೀರ್ಣ ಕ್ರಿಯೇಗೆ, ಮಲಬದ್ಧತೆಗೆ ಅತ್ಯುತಮ ಪಾನಕವಾಗಿದೆ. ಇದು ದೇಹದ ಉಷ್ಣವನ್ನು ಕಡಿಮೆ ಮಾಡುವುದರದೊಂದಿಗೆ ಬಾಯರಿಕೆ ನೀಗಿಸುವುದು. ಇದು ಮನೆಯಲ್ಲಿ ಸಿಗುವಂತಹ ಸಾಮಗ್ರಿಗಳಿಂದ ಅತ್ಯುತಮ ಆರೋಗ್ಯಕರ ಪಾನಕವನ್ನು ತಯಾರಿಸಿಕೊಳ್ಳಬಹುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಡಾ.ಮೊಹಮ್ಮದ ಅಮೀನುದ್ದಿನ್ ಅಸ್ಲಂ, ಡಾ.ರಾಜೇಂದ್ರ ಬೆನಕಿನಾಳ್, ಡಾ.ಪೂಜಾ, ಸಹಾಯಕ ಆಡಳಿತ ಅಧಿಕಾರಿ ಅಸ್ಮಾಬೇಗಂ,ಕಚೇರಿ ಅಧೀಕ್ಷಕ ನರಸಪ್ಪ, ಜಿಲ್ಲಾಧಿಕಾರಿಗಳ ಕಚೇರಿಯ ಸಿಬ್ಬಂದಿ ವರ್ಗದವರು ಹಾಗೂ ಆಯುಷ್ ಇಲಾಖೆಯ ಸಿಬ್ಬಂದಿ ವರ್ಗದವರು ಭಾಗವಹಿಸಿದರು.

Author
Publisher and Editor: Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮುನಿರಾಬಾದ್: ಆ. 17ರಂದು ವಿದ್ಯುತ್ ಗ್ರಾಹಕರ ಸಂವಾದ ಸಭೆ ----ವಿಶೇಷ ಚೇತನ ಮಕ್ಕಳ ಚಿಕಿತ್ಸೆಗೆ ಫಿಜಿಯೋಥೆರಪಿಸ್ಟ್, ಮಹಿಳಾ ಸಹಾಯಕಿಯರ ತಾತ್ಕಾಲಿಕ ನೇಮಕ: ಅರ್ಜಿ ಆಹ್ವಾನ ----ಕೊಪ್ಪಳ: ಜಪ್ತಿ ಮಾಡಲಾದ 349.10 ಕ್ವಿಂಟಾಲ್ ಅಕ್ಕಿ ಬಹಿರಂಗ ಹರಾಜು ಆಗಸ್ಟ್ 25ಕ್ಕೆ ----ಕುಟುಂಬದಲ್ಲಿ ಮಹಿಳೆಯರ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಿ: ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ. ಹನುಮಂತಪ್ಪ ಕರೆತೋಟಗಾರಿಕೆ ಇಲಾಖೆಯಿಂದ ವಿವಿಧ ಹಣ್ಣಿನ ಸಸಿ, ಕಸಿ ಗಿಡಗಳ ಮಾರಾಟಆಗಸ್ಟ್ 20 ರಂದು ಡಿ. ದೇವರಾಜ ಅರಸು ಜಯಂತಿ ಅರ್ಥಪೂರ್ಣ ಆಚರಣೆಗೆ ಜಿಲ್ಲಾಡಳಿತದಿಂದ ಸಿದ್ಧತೆ: ಅಪರ ಜಿಲ್ಲಾಧಿಕಾರಿ ಇ. ಬಾಲಕೃಷ್ಣಹಿಂದುಳಿದ ವರ್ಗಗಳ ಸಮಾಜದ ಮಹನೀಯರ ಜಯಂತಿಗಳಿಗೆ ರೂ.50 ಸಾವಿರ ಅನುದಾನ: ಮೇಯರ್ ಪಿ.ಗಾದೆಪ್ಪಕೊಪ್ಪಳದಲ್ಲಿ ಮೂರು ದಿನಗಳ ಸಾಮರ್ಥ್ಯಾಭಿವೃದ್ಧಿ ಕಾರ್ಯಕ್ರಮಕ್ಕೆ ಚಾಲನೆ -- ಮಕ್ಕಳ ರಕ್ಷಣೆಯಲ್ಲಿ ಬೆಂಬಲ ವ್ಯಕ್ತಿಗಳ ಪಾತ್ರ ಮಹತ್ವದ್ದು: ನ್ಯಾ. ಮಧು ಎನ್.ಆರ್. ----ಭಾರತ್ ಜೋಡೋ ಯುವ ಸಂಘಗಳ ನೋಂದಣಿಗೆ ಅರ್ಜಿ ಆಹ್ವಾನಬಳ್ಳಾರಿ ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ: ಶೇ. 81.83 ರಷ್ಟು ಡಿಜಿಟಲೀಕರಣ ಪೂರ್ಣ