Advertisement
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬಹುವಿಧ ದಾಸೋಹದ ಜಾತ್ರೆ

ಕೈಬೀಸಿ ನಮ್ಮೆಲ್ಲರನು ಕರೆಯುತಲಿಹುದು
ನಮ್ಮೂರಿನ ಅದ್ದೂರಿಯ ಜಾತ್ರೆಯು/ಪ/
ಗದಗ ಮಠದ ಜಾತ್ರೆಯ ಸೊಬಗಿನ ಸಿರಿಯನು
ನೋಡಿ ಆನಂದಿಸಿರಿ ನಾಡಿನ ಸೊಗಡನು
ಸಂಭ್ರಮಿಸಲು ಮರೆಯದೆ ಬನ್ನಿ
ಕಣ್ತುಂಬಿ ಅನುಭವಿಸಲು ಬನ್ನಿ/೧/
ರಕ್ತದಾನ ಅತ್ಯುತ್ತಮ ಮಹಾದಾನ
ಸ್ರೃಷ್ಟಿಕರ್ತನಂತೆ ಜೀವದಾನಕೆ ಪ್ರೇರಕವು
ಆರೋಗ್ಯ ಸಂರಕ್ಷಣೆ ತಪಾಸಣೆಯು
ಆರೋಗ್ಯವರ್ಧನೆಯ ಪ್ರತೀಕವು/೨/
ವ್ಯಸನ ಮುಕ್ತ ಪೂಜ್ಯರ ಪಾದಯಾತ್ರೆಯು
ರೋಗಮುಕ್ತ ಪರಿಸರಕೆ ಸ್ಪೂರ್ತಿಸೆಲೆಯು
ಯೋಗಧ್ಯಾನ ಪ್ರಾಣಾಯಮ ಶಿಬಿರವು
ದೀರ್ಘಾಯುಷಿ ಸೌಂದರ್ಯವರ್ಧಕವು/೩/
ದೇಶಿತಳಿ ಜಾನುವಾರು ಪ್ರದರ್ಶನವು
ಕ್ರೃಷಿಮೇಳ ವಿಚಾರ ಸಂಕಿರಣವು
ಸಾವಯವ ನಮ್ಮ ಕೃಷಿ ಪದ್ಧತಿಯು
ಸಮತೋಲನ ಆಹಾರಕೆ ರಹದಾರಿಯು/೪/
ಎಳ್ಹಚ್ಚಿದ ರೊಟ್ಟಿ ತರತರಹದಪಲ್ಯೆ ಚಟ್ನಿಯು
ನಾರಿಯರ ಬಸವಬುತ್ತಿ ಸವಿರುಚಿಯು
ಕರ್ಚಿಕಾಯಿ ಕರಿಹಿಂಡಿ ಮೊಸರನ್ನವು
ಸರ್ವರ ಬಾಯಲಿ ನೀರೂರಿಸುವವು/೫/
ತಜ್ಞರ ವೈಚಾರಿಕ ಚಿಂತನ ಮಂಥನವು
ಜಾಗೃತಿಯ ಹುರಿದುಂಬಿಸುತಲಿಹುದು
ದಿಗ್ಗಜ ಸಾಧಕರ ಕಲಾವಿದರ ಸನ್ಮಾನವು
ಪುಸ್ತಕಬಿಡುಗಡೆ ಜ್ಞಾನತ್ರೃಷೆಯ ರೂವಾರಿಯು/೬/
ಬಹುವಿಧದ ವಿಶೇಷ ದಾಸೋಹವು
ಜಾತ್ರಾ ಮಹೋತ್ಸವದ ವೈಭವವು
ಸಡಗರದ ಅದ್ದೂರಿಯ ವಿಜ್ರಂಭಣೆಯು
ಆಯಸ್ಕಾಂತದಂತೆ ಸರ್ವಾಕರ್ಷಣೆಯು/೭/


ಪ್ರೊ. ಶಕುಂತಲಾ.ಚನ್ನಪ್ಪ.ಸಿಂಧೂರ.ಗದಗ.
೯೯೮೦೭೧೧೪೩೫.

Author
Publisher and Editor: Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮುನಿರಾಬಾದ್: ಆ. 17ರಂದು ವಿದ್ಯುತ್ ಗ್ರಾಹಕರ ಸಂವಾದ ಸಭೆ ----ವಿಶೇಷ ಚೇತನ ಮಕ್ಕಳ ಚಿಕಿತ್ಸೆಗೆ ಫಿಜಿಯೋಥೆರಪಿಸ್ಟ್, ಮಹಿಳಾ ಸಹಾಯಕಿಯರ ತಾತ್ಕಾಲಿಕ ನೇಮಕ: ಅರ್ಜಿ ಆಹ್ವಾನ ----ಕೊಪ್ಪಳ: ಜಪ್ತಿ ಮಾಡಲಾದ 349.10 ಕ್ವಿಂಟಾಲ್ ಅಕ್ಕಿ ಬಹಿರಂಗ ಹರಾಜು ಆಗಸ್ಟ್ 25ಕ್ಕೆ ----ಕುಟುಂಬದಲ್ಲಿ ಮಹಿಳೆಯರ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಿ: ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ. ಹನುಮಂತಪ್ಪ ಕರೆತೋಟಗಾರಿಕೆ ಇಲಾಖೆಯಿಂದ ವಿವಿಧ ಹಣ್ಣಿನ ಸಸಿ, ಕಸಿ ಗಿಡಗಳ ಮಾರಾಟಆಗಸ್ಟ್ 20 ರಂದು ಡಿ. ದೇವರಾಜ ಅರಸು ಜಯಂತಿ ಅರ್ಥಪೂರ್ಣ ಆಚರಣೆಗೆ ಜಿಲ್ಲಾಡಳಿತದಿಂದ ಸಿದ್ಧತೆ: ಅಪರ ಜಿಲ್ಲಾಧಿಕಾರಿ ಇ. ಬಾಲಕೃಷ್ಣಹಿಂದುಳಿದ ವರ್ಗಗಳ ಸಮಾಜದ ಮಹನೀಯರ ಜಯಂತಿಗಳಿಗೆ ರೂ.50 ಸಾವಿರ ಅನುದಾನ: ಮೇಯರ್ ಪಿ.ಗಾದೆಪ್ಪಕೊಪ್ಪಳದಲ್ಲಿ ಮೂರು ದಿನಗಳ ಸಾಮರ್ಥ್ಯಾಭಿವೃದ್ಧಿ ಕಾರ್ಯಕ್ರಮಕ್ಕೆ ಚಾಲನೆ -- ಮಕ್ಕಳ ರಕ್ಷಣೆಯಲ್ಲಿ ಬೆಂಬಲ ವ್ಯಕ್ತಿಗಳ ಪಾತ್ರ ಮಹತ್ವದ್ದು: ನ್ಯಾ. ಮಧು ಎನ್.ಆರ್. ----ಭಾರತ್ ಜೋಡೋ ಯುವ ಸಂಘಗಳ ನೋಂದಣಿಗೆ ಅರ್ಜಿ ಆಹ್ವಾನಬಳ್ಳಾರಿ ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ: ಶೇ. 81.83 ರಷ್ಟು ಡಿಜಿಟಲೀಕರಣ ಪೂರ್ಣ