ಕೊಪ್ಪಳ ಆಗಸ್ಟ್ 06: ಮೀನುಗಾರಿಕೆ ಇಲಾಖೆಯಿಂದ 2026-27ನೇ ಸಾಲಿನ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ(ಪಿಎಂಎಂಎಸ್ವೈ) ಅಡಿಯಲ್ಲಿ ಮತ್ಸ್ಯ ವಾಹಿನಿ ಯೋಜನೆ ಮೂಲಕ ಕಿಯೋಸ್ಕ್ ವಾಹನಗಳನ್ನು ಪಡೆಯಲು ಕುಷ್ಟಗಿ/ಗಂಗಾವತಿ, ಕನಕಗಿರಿ ಹಾಗೂ ಕಾರಟಗಿ ತಾಲೂಕುಗಳ ಮೀನುಗಾರರ ಸಹಕಾರ ಸಂಘಗಳ ಸದಸ್ಯರು, ವೃತ್ತಿಪರ ಮೀನುಗಾರರು ಹಾಗೂ ಆಸಕ್ತ ಮೀನುಕೃಷಿಕರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಈ ಯೋಜನೆಯ ಸೌಲಭ್ಯ ಪಡೆಯಲು ಆಸಕ್ತ ಮೀನುಗಾರರು/ಮೀನುಕೃಷಿಕರು ಅಗಸ್ಟ್ 25 ರೊಳಗೆ ಅರ್ಜಿಗಳನ್ನು ಸಲ್ಲಿಸಬಹುದು. ನಿಗದಿಪಡಿಸಿರುವ ಗುರಿಗಳಿಗೆ ಅನುಗುಣವಾಗಿ ಮತ್ತು ಸರ್ಕಾರದ ಷರತ್ತು ಹಾಗೂ ನಿಯಮಗಳ ಅನುಸಾರ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಮೀನುಗಾರಿಕೆ ಸಹಾಯಕ ನಿರ್ದೇಶಕರು ಗಂಗಾವತಿ/ಕುಷ್ಟಗಿ ಕಛೇರಿಗೆ ಸಂಪರ್ಕಿಸುವAತೆ ಗಂಗಾವತಿ ಮೀನುಗಾರಿಕೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
