Advertisement
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಹೀಗೊಂದು ಕಾರ್ಮಿಕರ ನೋವು

ನಾವಿಲ್ಲದೆ ನೀವಿಲ್ಲ, ನೀವಿಲ್ಲದೆ ನಾವಿಲ್ಲ.
ಇಬ್ಬರು ಕೈ ಜೋಡಿಸಿದಾಗಲೇ ಆಗುವುದು ಚಪ್ಪಾಳೆ.
ನಮ್ಮ ಶ್ರಮಕ್ಕೆ ನೀವು ಕೊಟ್ಟ ಸಂಬಳ,
ನಮಗೆ ನಮ್ಮ ಕುಟುಂಬ ಚೆನ್ನಾಗಿ ನೋಡಿಕೊಳ್ಳುವ ಹಂಬಲ.
ನೀವು ಇರದಿದ್ದರೆ ನಾವು ಬರುತ್ತಿದ್ದೆವು ಬೀದಿಗೆ,
ನಾವಿರದಿದ್ದರೆ ಏರುತ್ತಿರಲಿಲ್ಲ ನೀವು
ಬಹು ಮಹಡಿಗಳ ಮಾಳಿಗೆ.
ಮಳೆ,ಗಾಳಿ,ಬಿಸಿಲೆನ್ನದೆ ಹಿಡಿವೆವು ಕೈಯಲ್ಲಿ ಪುಟ್ಟಿ,
ಖಾರ ರೊಟ್ಟಿ ತಿಂದು ದುಡಿಯಲು ಆಗೀವಿ ಗಟ್ಟಿ.
ಮಕ್ಕಳ ಭವಿಷ್ಯದ ಕನಸ ಕಾಣುತ್ತಾ,
ದುಡಿಯುತ್ತಿದ್ದೇವೆ ನಿಮ್ಮಗಳ ಸುತ್ತ.
ನಿಮಗಿರಲಿ ಉದಾರ ಮನಸ್ಸಿನ ಹಸ್ತ.
ನಮ್ಮಂತೆ ನಮ್ಮ ಮಕ್ಕಳು ಆಗುವದು ಬೇಡ,
ಶಿಕ್ಷಣ ಕಲಿತು ಅವರು ಉದ್ದಾರ ಆಗಬೇಕು ನೋಡ.
ಬರದಿರಲಿ ಅವರಿಗೆ ನಮ್ಮ ಪಾಡ,
ಕಾರ್ಮಿಕರೆಂದರೆ ಪಶುಗಳಲ್ಲ ಕಾಣಾ.
ದುಡಿಮೆಯೇ ದೇವರೆಂದು ನಂಬಿದವರು ನಾವು ,
ದುಡಿಯುವವರನ್ನು ಮನುಷ್ಯರಂತೆ ಕಾಣಬೇಕು ನೀವು.
ನಾವು ಕಟ್ಟದಿದ್ದರೆ ಮಹಡಿಗಳ
ಹುಡುಕಬೇಕಿತ್ತು ನೀವು
ಊರ ಹೊರಗಿನ ಕೆರೆ ಕಟ್ಟೆಗಳ.
ನಮಗೂ ಜೀವವಿದೆಯೆಂಬ ಅರಿವಿರಲಿ ನಿಮಗೆ,
ಖಂಡಿತ ನಿಮ್ಮ ಮೇಲೆ ಬರುತ್ತೆ ಭಯ,ಭಕ್ತಿ,ಪ್ರೀತಿ ನಮಗೆ.
ದುಡ್ಡೇ ಶಾಶ್ವತವಲ್ಲ ಎಲ್ಲರಿಗೂ,
ಮಾನವೀಯತೆ ಮುಖ್ಯ ಪ್ರತಿಯೊಬ್ಬರಿಗೂ.



ಶ್ರೀಮತಿ :ಉಮಾ ಗವೀಶ ಕಲ್ಮಠ. ಶಿಕ್ಷಕಿ
ಸರಕಾರಿ ಪ್ರೌಢಶಾಲೆ ಹಟ್ಟಿ (ಅಳವಂಡಿ )ಕೊಪ್ಪಳ

Author
Publisher and Editor: Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮುನಿರಾಬಾದ್: ಆ. 17ರಂದು ವಿದ್ಯುತ್ ಗ್ರಾಹಕರ ಸಂವಾದ ಸಭೆ ----ವಿಶೇಷ ಚೇತನ ಮಕ್ಕಳ ಚಿಕಿತ್ಸೆಗೆ ಫಿಜಿಯೋಥೆರಪಿಸ್ಟ್, ಮಹಿಳಾ ಸಹಾಯಕಿಯರ ತಾತ್ಕಾಲಿಕ ನೇಮಕ: ಅರ್ಜಿ ಆಹ್ವಾನ ----ಕೊಪ್ಪಳ: ಜಪ್ತಿ ಮಾಡಲಾದ 349.10 ಕ್ವಿಂಟಾಲ್ ಅಕ್ಕಿ ಬಹಿರಂಗ ಹರಾಜು ಆಗಸ್ಟ್ 25ಕ್ಕೆ ----ಕುಟುಂಬದಲ್ಲಿ ಮಹಿಳೆಯರ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಿ: ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ. ಹನುಮಂತಪ್ಪ ಕರೆತೋಟಗಾರಿಕೆ ಇಲಾಖೆಯಿಂದ ವಿವಿಧ ಹಣ್ಣಿನ ಸಸಿ, ಕಸಿ ಗಿಡಗಳ ಮಾರಾಟಆಗಸ್ಟ್ 20 ರಂದು ಡಿ. ದೇವರಾಜ ಅರಸು ಜಯಂತಿ ಅರ್ಥಪೂರ್ಣ ಆಚರಣೆಗೆ ಜಿಲ್ಲಾಡಳಿತದಿಂದ ಸಿದ್ಧತೆ: ಅಪರ ಜಿಲ್ಲಾಧಿಕಾರಿ ಇ. ಬಾಲಕೃಷ್ಣಹಿಂದುಳಿದ ವರ್ಗಗಳ ಸಮಾಜದ ಮಹನೀಯರ ಜಯಂತಿಗಳಿಗೆ ರೂ.50 ಸಾವಿರ ಅನುದಾನ: ಮೇಯರ್ ಪಿ.ಗಾದೆಪ್ಪಕೊಪ್ಪಳದಲ್ಲಿ ಮೂರು ದಿನಗಳ ಸಾಮರ್ಥ್ಯಾಭಿವೃದ್ಧಿ ಕಾರ್ಯಕ್ರಮಕ್ಕೆ ಚಾಲನೆ -- ಮಕ್ಕಳ ರಕ್ಷಣೆಯಲ್ಲಿ ಬೆಂಬಲ ವ್ಯಕ್ತಿಗಳ ಪಾತ್ರ ಮಹತ್ವದ್ದು: ನ್ಯಾ. ಮಧು ಎನ್.ಆರ್. ----ಭಾರತ್ ಜೋಡೋ ಯುವ ಸಂಘಗಳ ನೋಂದಣಿಗೆ ಅರ್ಜಿ ಆಹ್ವಾನಬಳ್ಳಾರಿ ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ: ಶೇ. 81.83 ರಷ್ಟು ಡಿಜಿಟಲೀಕರಣ ಪೂರ್ಣ