Advertisement
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಮುಂದಿನ ನಿಲ್ದಾಣ. ( ಶುದ್ಧ ಕನ್ನಡತಿ ಅಪರ್ಣಾಳಿಗೆ ಅರ್ಪಣೆ )

ಸತ್ಯವೋ ಮಿಥ್ಯವೋ ಗೊಂದಲದ ಗಳಿಗೆ
ಪರದೆಯ ಮೇಲೆ ಇನ್ನಿಲ್ಲ ಪದ ಕಂಡು
ಕೊರಗಿತ್ತು ಮನ ನಡುಗಿತ್ತು ಶ್ವಾಸ
ಅಘಾತವೋ ಅಪಘಾತವೋ ಆತ್ಮಘಾತವೋ
ಒಂದು ಕ್ಷಣ ಮೌನ ತಟ್ಟನೆ ಜಾರಿದ ಕಂಬನಿ
ಕೊನೆಗೂ ಅರಿಯಿತು ಆತ್ಮ ಹಾರಿದ ದಿಟ



ಕಿರುನಗೆಯ ಬಿಳಿ ಚೆಲುವೆ ಮಾಯಾವದಳು
ನಗುತ್ತಾ ನಗಿಸುತ್ತಾ ಬದುಕಿದ ದುಂಬಿ
ಕಾಣದೆ ಹಾರುತಿದೆ ಜಡ್ಡಿನ ಬಾಧೆಗೆ
ಬೆಂಕಿಯಲ್ಲಿ ಅರಳಿ ಬಾಣಲೆಯಲ್ಲಿ ಬೆಂದು
ಬಂಗಾರವಾಯಿತು ಕನ್ನಡದ ಪುಟದಲ್ಲಿ
ಉಳಿಯುವುದು ಅಳಿಯಿತು ಒಣಗಿದ ಕೊಂಬೆಯಂತೆ

ತಾಯ್ನೆಲದ ಪದಗಳಿಗೆ ಹೃದಯ ಅಡವಿಟ್ಟು
ಕರಿ ಮಣ್ಣ ಜನರ ಭಾವದಲ್ಲಿ ಬೆಸೆದು
ವಾಗ್ಮಿಯಾದಳು ಪಂಚನಹಳ್ಳಿಯ ಪುಟ್ಟ
ಮಾತನ್ನು ಹೂಡಿ ಕಾಯಕವ ಕಟ್ಟಿ
ನಿತ್ಯ ರೂಪಿಸಿದಳು ನಿರೂಪಣೆಯ ಚಾವಣಿ
ಶೃಂಗಾರ ನುಡಿಗೆ ಸೋಲು ಅಳಿದಿತ್ತು


ಹತ್ತಾರು ಜಗಲಿಗಳು ನೂರಾರು ಮಂಟಪಗಳು
ಗೆಳೆಯರಾಗಲು ಕಾಯುತ್ತಿದ್ದವು
ಮಾತಿನ ಪರಿಮಳ ಕಂಠದ ಮಧುಫಲಕ್ಕೆ
ಸರತಿ ಸಾಲಿನಲ್ಲಿ ಇಣುಕುತ್ತಿದ್ದವು
ಹೊತ್ತುಗಳು ಮುಳುಗಿ ನೇಸರ ಕಳೆದರು
ಮಾತ ಗೌರಿಯ ಮಾತೇ ಮಾಣಿಕ್ಯ

ಕನ್ನಡದ ಅಸ್ಮಿತೆ ಹೃದಯ ಹೂವು
ಕಾಣದ ದಾರಿ ಹಿಡಿದಿದೆ
ನುಡಿಗಳ ಮಲ್ಲಿಗೆ ವರ್ಣ ನಿಲ್ಲಿಸಿದೆ
ಎದೆಯತ್ತರದ ಆಲಕ್ಕೆ ನಂಜು ಬಿದ್ದಿದೆ
ಬರಸಿಡಿಲು ಬಡಿದು ಕತ್ತಲಾಗಿದೆ ಕರುನಾಡು
ಯಾರಿಗೂ ಹೇಳದೇ ಹೊರಟು ನಿಂತರು
ಮುಂದಿನ ನಿಲ್ದಾಣದತ್ತ..

ಚೌಡ್ಲಾಪುರ ಸೂರಿ

Author
Publisher and Editor: Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜು.02 ರಂದು ಡಾ.ಫ.ಗು. ಹಳಕಟ್ಟಿಯವರ ಜನ್ಮದಿನ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮಮನಸೂರೆಗೊಂಡ ಸಂತಕವಿ ಕನಕದಾಸರ ‘ಮುತ್ತು ಬಂದಿದೆ ಕೇರಿಗೆ’ ಸಂಗೀತ-ನೃತ್ಯ ರೂಪಕ ಪ್ರದರ್ಶನಬಳ್ಳಾರಿ ಸರ್ಕಾರಿ ಪಾಲಿಟೆಕ್ನಿಕ್: ಪೋಸ್ಟ್ ಡಿಪ್ಲೋಮಾ ಇನ್ ಇಂಡಸ್ಟಿçಯಲ್ ಸೇಫ್ಟಿ ಕೋರ್ಸ್ ಪ್ರವೇಶಾತಿ ಅವಧಿ ವಿಸ್ತರಣೆನಮ್ಮ ಬದುಕಿನ ಭರವಸೆ....ವೈದ್ಯರುಇಟಗಿ ಆದರ್ಶ ವಿದ್ಯಾಲಯದ 6ನೇ ತರಗತಿ ಖಾಲಿ ಸೀಟುಗಳಿಗೆ ಕೌನ್ಸಲಿಂಗ್ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕಲಾವಿದರಿಂದ ಅರ್ಜಿ ಆಹ್ವಾನ ನದಿಗಳ ಜೋಡಣೆ ರಾಷ್ಟ್ರೀಯ ಯೋಜನೆಯಾಗಬೇಕು: ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡುಹೊರಗುತ್ತಿಗೆ ಹುದ್ದೆಗಳಿಗೆ ಅರ್ಜಿ ಆಹ್ವಾನಬಳ್ಳಾರಿ ರೈಲ್ವೆ ನಿಲ್ದಾಣ : ಜುಲೈ 30ರೊಳಗಾಗಿ ಹೊಸ ಲಿಫ್ಟ್, ಸೆನ್ಸಾರ್ ಎಸ್ಕಲೇಟರ್ ಪ್ರಾರಂಭ ಸಾಧ್ಯತೆಜೂನ್ 25ರಂದು ತುಂಗಭದ್ರ ಜಲಾಶಯ ಆವರಣದಲ್ಲಿ ಐತಿಹಾಸಿಕ ಕಾರ್ಯಕ್ರಮ: ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಮಾಗಮ