Advertisement
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಈ ಹಣ್ಣುಗಳು ಹೆಚ್ಚೆಚ್ಚು ಇದ್ದಷ್ಟು ವನ್ಯಜೀವಿಗಳಿಗೆ ಬಹಳ ಉಪಕಾರಿ

ಚಳ್ಳೆಹಣ್ಣು ಎಂಬ ನುಡಿಗಟ್ಟನ್ನು ಬಳಸಿರುತ್ತೇವೆ. ಆದರೆ ನಮ್ಮಲ್ಲಿ ಬಹಳಷ್ಟು ಜನರಿಗೆ ಚಳ್ಳೆಹಣ್ಣು ಎಂದರೆ ಯಾವುದು, ರೀತಿ ಒಂದು ಹಣ್ಣು ಇದೆ ಎಂಬುದೇ ತಿಳಿದಿಲ್ಲವೆನ್ನಬಹುದು.
ಚಳ್ಳೆ ಹಣ್ಣು ( ಕಾರ್ಡಿಯಾ ಮೈಕ್ಸಾ) ಕರ್ನಾಟಕದ ಬಹುತೇಕ ಭಾಗಗಳಲ್ಲಿ ಹಿಂದೆ ಸಾಮಾನ್ಯವಾಗಿ ಕಂಡು ಬರುತ್ತಿದ್ದ ಮರ. ಆದರೆ ಇತ್ತೀಚೆಗೆ ಇದರ ವ್ಯಾಪನೆಯ ಪ್ರಮಾಣ ತುಂಬಾ ಕಡಿಮೆಯಾಗಿದೆ ಎನ್ನಬಹುದು. ಆಡುಭಾಷೆಯಲ್ಲಿ ಗೊಣ್ಣೆಹಣ್ಣು, ಸುಂಬಳ ಹಣ್ಣು ಎಂದು ಕರೆಯಲ್ಪಡುವ ಹಣ್ಣು, ಪದಕ್ಕೆ ಅನ್ವರ್ಥದಂತಿದೆ. ಮೇಲಿನ ಸಿಪ್ಪೆ ತೆಗೆದರೆ ಅಂಟು ಅಂಟಾಗಿ, ಜಿಗುಟಾದ ಲೋಳೆಯಂತಹ ಜಾರುವ ಗುಣವನ್ನು ಹೊಂದಿರುವ ಹಣ್ಣಿನ ತಿರುಳು ಚಳ್ಳೆಹಣ್ಣು ಎಂಬ ನುಡಿಗಟ್ಟಿಗೆ ಸರಿಯಾಗಿ ಹೊಂದುವ ಹೋಲಿಕೆ.
ಕೋತಿ, ಅಳಿಲಿನಂತಹ ಮರವಾಸಿ ಪ್ರಾಣಿಗಳು ಹಾಗೂ ಹಲವು ಹತ್ತು ಪಕ್ಷಿಗಳಿಗೆ ಭೂರಿಭೋಜನ ಒದಗಿಸುವ ಹಣ್ಣುಗಳು ಹೆಚ್ಚೆಚ್ಚು ಇದ್ದಷ್ಟು ವನ್ಯಜೀವಿಗಳಿಗೆ ಬಹಳ ಉಪಕಾರಿ. ಆದರೆ ಬದಲಾದ ಕೃಷಿ ಮಾದರಿಯಲ್ಲಿ, ಗೋಮಾಳ, ಕೆರೆಮಾಳ, ರಾಜಕಾಲುವೆ, ಕರಾಬು ಜಮೀನು ಸೇರಿ ಚೂರು ಜಾಗವನ್ನು ಬಿಡದೆ ಕೃಷಿ ಅಥವಾ ಇತರ ಉಪಯೋಗಕ್ಕೆ ಬಳಸುತ್ತಿರುವ ನಾವುಗಳು ಮರಗಳನ್ನು ಅಪರೂಪವಾಗಿಸಿದ್ದೇವೆ. ಮರಗಳ ವಿಶೇಷವೆಂದರೆ ಇವು ಹಳ್ಳದ ಮಗ್ಗಲು, ಇರುವಲ್ಲಿಯೇ ಹೆಚ್ಚಾಗಿ ಬೆಳೆಯುವುದು.

Author
Publisher and Editor: Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮುನಿರಾಬಾದ್: ಆ. 17ರಂದು ವಿದ್ಯುತ್ ಗ್ರಾಹಕರ ಸಂವಾದ ಸಭೆ ----ವಿಶೇಷ ಚೇತನ ಮಕ್ಕಳ ಚಿಕಿತ್ಸೆಗೆ ಫಿಜಿಯೋಥೆರಪಿಸ್ಟ್, ಮಹಿಳಾ ಸಹಾಯಕಿಯರ ತಾತ್ಕಾಲಿಕ ನೇಮಕ: ಅರ್ಜಿ ಆಹ್ವಾನ ----ಕೊಪ್ಪಳ: ಜಪ್ತಿ ಮಾಡಲಾದ 349.10 ಕ್ವಿಂಟಾಲ್ ಅಕ್ಕಿ ಬಹಿರಂಗ ಹರಾಜು ಆಗಸ್ಟ್ 25ಕ್ಕೆ ----ಕುಟುಂಬದಲ್ಲಿ ಮಹಿಳೆಯರ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಿ: ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ. ಹನುಮಂತಪ್ಪ ಕರೆತೋಟಗಾರಿಕೆ ಇಲಾಖೆಯಿಂದ ವಿವಿಧ ಹಣ್ಣಿನ ಸಸಿ, ಕಸಿ ಗಿಡಗಳ ಮಾರಾಟಆಗಸ್ಟ್ 20 ರಂದು ಡಿ. ದೇವರಾಜ ಅರಸು ಜಯಂತಿ ಅರ್ಥಪೂರ್ಣ ಆಚರಣೆಗೆ ಜಿಲ್ಲಾಡಳಿತದಿಂದ ಸಿದ್ಧತೆ: ಅಪರ ಜಿಲ್ಲಾಧಿಕಾರಿ ಇ. ಬಾಲಕೃಷ್ಣಹಿಂದುಳಿದ ವರ್ಗಗಳ ಸಮಾಜದ ಮಹನೀಯರ ಜಯಂತಿಗಳಿಗೆ ರೂ.50 ಸಾವಿರ ಅನುದಾನ: ಮೇಯರ್ ಪಿ.ಗಾದೆಪ್ಪಕೊಪ್ಪಳದಲ್ಲಿ ಮೂರು ದಿನಗಳ ಸಾಮರ್ಥ್ಯಾಭಿವೃದ್ಧಿ ಕಾರ್ಯಕ್ರಮಕ್ಕೆ ಚಾಲನೆ -- ಮಕ್ಕಳ ರಕ್ಷಣೆಯಲ್ಲಿ ಬೆಂಬಲ ವ್ಯಕ್ತಿಗಳ ಪಾತ್ರ ಮಹತ್ವದ್ದು: ನ್ಯಾ. ಮಧು ಎನ್.ಆರ್. ----ಭಾರತ್ ಜೋಡೋ ಯುವ ಸಂಘಗಳ ನೋಂದಣಿಗೆ ಅರ್ಜಿ ಆಹ್ವಾನಬಳ್ಳಾರಿ ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ: ಶೇ. 81.83 ರಷ್ಟು ಡಿಜಿಟಲೀಕರಣ ಪೂರ್ಣ